Thursday, March 7, 2013


N. Bhavani Shankar, St. Mary's College, Shirva, Udupi Dt.


ಔಷಧಗಳಿಲ್ಲದೆ  ಡಯಾಬಿಟೀಸ್ ಪೂರ್ತಿ ಗುಣವಾಗುತ್ತದೆ-ಕೃತಿ ಬಿಡುಗಡೆ



ಶಿರ್ವ ಸಂತ ಮೇರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಎನ್.ಭವಾನಿಶಂಕರ್ ರವರ 26 ನೇ ಕೃತಿಯಾದ ಡಯಾಬಿಟೀಸ್ ಪೂರ್ತಿ ಗುಣವಾಗುತ್ತದೆ ಎನ್ನುವ 240 ಪುಟಗಳ ಸಂಶೋಧನಾಧಾರಿತವಾದ ಬರಹವನ್ನು ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇ ದ ಮೆಡಿಕಲ್ ಸೈನ್ಸಸ್ನಲ್ಲಿ ರೀಡರ್ ಆಗಿರುವ ವೈದ್ಯರಾದ ಡಾ. ಪ್ರೀತಿ (ಎಂ.ಎಸ್. ಆಯುವರ್ೇದ) ಯವರು ಕನ್ನರಪಾಡಿಯ ಲಕ್ಷ್ಮಿ ಪ್ಲಾಟಿನಮ್ನಲ್ಲಿ ಬಿಡುಗಡೆಗೊಳಿಸಿದರು. 
ಇಂದಿನ ಎಲ್ಲಾ ಕಾಯಿಲೆಗಳಿಗೆ ಕೈಗಾರಿಕೀಕರಣದ ಅನಂತರದ ಆಹಾರ ಪದ್ಧತಿಯು ಹೇಗೆ ಮಾರಕವಾಗುತ್ತದೆ ಎಂಬುದನ್ನು ಲೇಖಕರು ಸಮರ್ಥವಾಗಿ ಚಿತ್ರಿಸುತ್ತ ಈ ಡಯಾಬಿಟೀಸ್ ಎಂಬುದು ಕಣ್ಣು, ಹೃದಯ, ನರ ಮಂಡಲ, ಮೂತ್ರಪಿಂಡ, ಆಥ್ರೈಟಿಸ್ ಇತ್ಯಾದಿ ಕಾಯಿಲೆಗಳಿಗೆ ಕಾರಣವಾಗುವ ಚಿತ್ರಣವನ್ನು ನೀಡುತ್ತಾರೆ. ಆಹಾರ ಮತ್ತು ಜೀವನ ಶೈಲಿಯ ಕಾರಣಕ್ಕಾಗಿ ಬರುವ ಈ ಡಯಾಬಿಟೀಸ್ ಕಾಯಿಲೆಯ ಗುಣವಾಗುವಿಕೆಗಾಗಿ ಸಾಯುವ ತನಕ ಔಷಧವನ್ನು ತೆಗೆದುಕೊಳ್ಳಬೇಕಾಗಿರುವುದು ಇಂದಿನ ದೊಡ್ಡ ದುರಂತ. 

ಡಯಾಬಿಟೀಸ್ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯನ್ನು ಯಾವ ಔಷಧವೂ ಇಲ್ಲದೆ ಗುಣಪಡಿಸಿಕೊಳ್ಳುವ ಬಗ್ಗೆ ಪಶ್ಚಿಮ ದೇಶಗಳ ಡಾ. ಕಾಲ್ಡ್ವೆಲ್ ಬಿ. ಎಸೆಲ್ ಸ್ಟೈನ್, ಡಾ. ಜಾನ್ ಎ. ಮೆಕ್ ಡೌಗೆಲ್, ಡಾ. ಡೀನ್ ಆರ್ನಿಶ್ ಡಾ. ಡೆನಿಸ್ ಬುರ್ಕಿಟ್ ಮತ್ತು ನಮ್ಮ ದೇಶದ ಡಾ. ಬಿಸ್ವರೂಪ್ ರಾಯ್ ಚೌಧುರಿಯವರು ಮಾಡಿರುವ ಸಂಶೋಧನೆಗಳ ಪೂರ್ಣ ವಿವರಗಳನ್ನು ನೀಡುತ್ತಾರೆ. ಇಂತಹ ಒಂದು ಪದ್ಧತಿಯನ್ನು ತನ್ನ ಮೇಲೆಯೇ ಗುಣಪಡಿಸಿಕೊಂಡುದರ ವಿಸ್ತಾರವಾದ ವಿವರಣೆಯನ್ನೂ ನೀಡುತ್ತಾರೆ. ಸರಳ ಶೈಲಿಯ ಈ ಕನ್ನಡ ಕೃತಿ ವೈದ್ಯಕೀಯ ಲೋಕಕ್ಕೆ ಒಂದು ಅದ್ಭುತ ಕೊಡುಗೆ ಎಂದು ಅವರು ವಿವರಿಸಿದರು.

ಪುಸ್ತಕದ ಪ್ರಕಾಶಕರಾದ ವಿ.ಶಾರದಾರವರು ಸ್ವಾಗತಿಸಿದರು. ಶ್ರೀ ಬಾಬುರಾಯ ಶೆಣೈರವರು ಸಮಾಜದ ಅರಿವನ್ನು ಹೆಚ್ಚಿಸುವ ಎನ್.ಭವಾನಿಶಂಕರ್ರವರ ವೈವಿಧ್ಯಮಯವಾದ 26 ಕೃತಿಗಳ ಬಗ್ಗೆ ಮಾತನಾಡುತ್ತ ಶುಭ ಕೋರಿದರು.   ಡಾ. ಸುಧೀಂದ್ರ ಮೊಹರರ್, ಶ್ರೀ ಜಗದೀಶ್ ಕಾಮತ್ರವರು ಉಪಸ್ಥಿತರಿದ್ದರು.  ಶ್ರೀಮತಿ ಸಾವಿತ್ರಿ ವಂದಿಸಿದರು.         



ಭಾರತ ದೇಶದ ಭ್ರಷ್ಟಾಚಾರದ ಹಗರಣಗಳನ್ನು ಪರಿಚಯಿಸುವ ಕೃತಿ
ಎನ್.ಭವಾನಿಶಂಕರ್‌ರವರ
"ದೇಶ ದ್ರೋಹಿಗಳ ಕತೆ"-ಕೃತಿ ಬಿಡುಗಡೆ



ಸಂತ ಮೇರಿ ಕಾಲೇಜಿನಲ್ಲಿ ಎನ್.ಭವಾನಿಶಂಕರ್ರವರು  ಬರೆದ ದೇಶ ದ್ರೋಹಿಗಳ ಕತೆ ಎಂಬ ಅವರ 24ನೇ ಕೃತಿಯನ್ನು ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪದ್ಮನಾಭ ಭಟ್ರವರು ಬಿಡುಗಡೆ ಮಾಡಿದರು. ಅವರು ಮಾತನಾಡುತ್ತ ಈ ಕೃತಿಯು ಭಾರತ ದೇಶದ ಈವರೆಗಿನ ಎಲ್ಲಾ ಅಂದರೆ ಕಾಮನ್ವೆಲ್ತ್, ಟುಜಿ, ತ್ರಿಜಿ..... ಯಂತಹ ನೂರಾರು ಹಗಣರಣಗಳನ್ನು ಪರಿಚಯಿಸುತ್ತದೆ. ದೇಶದ ರಾಜಕಾರಣಿಗಳು ಪ್ರಜೆಗಳ ತೆರಿಗೆಯ ಹಣವಾದ- ಉತ್ತಮವಾದ ರಸ್ತೆ, ನೀರಿನ ವ್ಯವಸ್ಥೆ, ಸಾರಿಗೆ, ವಿದ್ಯೆ, ಆಸ್ಪತ್ರೆ, ಅಣೆಕಟ್ಟು..... ಗಳಿಗೆ ಬಳಕೆಯಾಗಬಹುದಾದ  ಕೋಟ್ಯಂತರ ರೂಪಾಯಿಗಳನ್ನು ಹೇಗೆ ಲೂಟಿ ಹೊಡೆಯುತ್ತಾರೆ ಎಂಬುದನ್ನು ವಿವರವಾಗಿ ಚಿತ್ರಿಸುತ್ತದೆ. ರಾಜಕಾರಣಿಗಳು ದುಡ್ಡು ಮಾಡುವ ವಿಧಾನವನ್ನು, ಅದರ ತಂತ್ರಗಳನ್ನು ವಿವರವಾಗಿ ಪರಿಚಯಿಸುತ್ತ, ಇದನ್ನು ತಡೆಗಟ್ಟಲು ಇರುವಂತಹ ಮಾಹಿತಿ ಹಕ್ಕು ಕಾಯಿದೆ ಮತ್ತು ಇತರ ಅನೇಕ ವಿಧಾನಗಳನ್ನು ಪರಿಚಯಿಸುತ್ತದೆ. ಪ್ರಜೆಗಳು ಪಂಚೆ, ಸೀರೆ, ಹೆಂಡಗಳಿಗೆ ತಮ್ಮನ್ನು ಮಾರಿಕೊಳ್ಳದೆ ತಮ್ಮ ಮತದಾನವೆಂಬ ಕ್ರಾಂತಿಕಾರಕ ರೀತಿಯ ಮೂಲಕ ದೇಶದ ಭವಿಷ್ಯವನ್ನು ಅಭಿವೃದ್ಧಿಯ ಕಡೆಗೆ ಬದಲಾಯಿಸುವ ಕ್ರಮವನ್ನು ತಿಳಿಸುತ್ತದೆ ಎಂದು ಹೇಳಿದರು.
ಪ್ರೊ. ಗೋಪಾಲಕೃಷ್ಣ ಸಾಮಗರವರು ಸ್ವಾಗತಿಸಿದರು. ಪ್ರಾಂಶುಪಾಲರಾದ ಪ್ರೊ. ವಿ.ಎನ್.ರಾಜನ್ರವರು ಎನ್.ಭವಾನಿಶಂಕರ್ರವರು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕೃತಿ ರಚನೆ ಮಾಡುವುದನ್ನು ಮೆಚ್ಚಿಕೊಂಡರು. ಪ್ರೊ. ವಿಠಲ ನಾಯಕ್ ಶುಭಾಶಂಸನೆಗೈದರು.  ಪ್ರೊ. ಯಶೋದ ವಂದಿಸಿದರು. ಕುಮಾರಿ ಸುವೇತ ಕಾರ್ಯಕ್ರಮವನ್ನು ನಿರೂಪಿಸಿದರು.  

ಪೆಟ್ರೀಶಿಯ ಡೇಸ ಬರೆದ "ನಾನು ನೋಡಿದ ಲಂಡನ್"-ಕೃತಿ ಬಿಡುಗಡೆ


ಸಂತ ಮೇರಿ ಕಾಲೇಜಿನಲ್ಲಿ ಪೆಟ್ರೀಶಿಯ ಡೇಸರವರು ಬರೆದ ನಾನು ನೋಡಿದ ಲಂಡನ್ ಕೃತಿಯನ್ನು ಕಾಲೇಜಿನ ಪ್ರಾಧ್ಯಾಪಕರಾದ ಸುಬ್ರಹ್ಮಣ್ಯ ಬಿ. ಅವರು ಬಿಡುಗಡೆ ಮಾಡಿದರು. ಅವರು ಮಾತನಾಡುತ್ತ ಈ ಕೃತಿಯು ಪೆಟ್ರೀಶಿಯ ಅವರ ಲಂಡನ್ನ ಭೇಟಿಯನ್ನು ಕಣ್ಣಿಗೆ ಕಟ್ಟುವಂತೆ ವಣರ್ಿಸಿದೆ. ಅವರು ತಾನು ಲಂಡನ್ನಿನಲ್ಲಿ ಕಂಡಂತಹ ಸಾಮಾನ್ಯ ಜನರ ಜೀವನ, ಅಲ್ಲಿನ ಮ್ಯೂಸಿಯಂ, ತಂತ್ರಜ್ಞಾನದಲ್ಲಿನ ಅವರ ಪ್ರಗತಿ, ಜನರ ಶಿಸ್ತು, ಕಲಾತ್ಮಕತೆಯನ್ನು ಅತ್ಯಂತ ಚೆನ್ನಾಗಿ ಬರೆದಿದ್ದಾರೆ.  ಅಲ್ಲಿನ ಸುಂದರವಾದ ರಸ್ತೆಗಳು, ಎಲ್ಲಿ ನೋಡಿದರೂ ಒಂದು ತುಣುಕಿನಷ್ಟೂ ಕಸವಿಲ್ಲದಿರುವುದು, ಕಾರಿನಲ್ಲಿನ ನ್ಯಾವಿಗೇಟರ್ ಉಪಕರಣ, ಅದು ಮಾತಿನ ಮೂಲಕ ದಾರಿ ತೋರುವ ಕ್ರಮ, ವಯಸ್ಸಾದವರು ಬಸ್ಸು ಇಳಿಯುವಾಗ ಬಸ್ಸಿನ ಮೆಟ್ಟಿಲು ಕುಸಿದು ರಸ್ತೆಯ ಮಟ್ಟಕ್ಕೆ ಬರುವುದು... ಹೀಗೆ ಅನೇಕ ವಿವರಗಳು ಈ ಕೃತಿಯಲ್ಲಿವೆ. ಈ ಕೃತಿಯು ಅತ್ಯಾಕರ್ಷಕವಾಗಿದೆ ಎಂದರು.

ಲಂಡನ್ನಿನಲ್ಲಿ ನನ್ನ 35 ದಿನಗಳು

ಸಂತ ಮೇರಿ ಕಾಲೇಜಿನ ಅಂತಿಮ ಬಿಕಾಂನ ವಿದ್ಯಾಥರ್ಿನಿಯಾದ ಪೆಟ್ರೀಶಿಯ ಡೇಸರವರು ತಾವು ಪರೀಕ್ಷೆಯ ಅನಂತರದ ರಜಾ ದಿನಗಳಲ್ಲಿ ಲಂಡನ್ನಿಗೆ ಪ್ರವಾಸ ಹೋದುದರ ತಮ್ಮ ಅನುಭವವನ್ನು ಹಂಚಿಕೊಂಡರು. ತಾವು ಲಂಡನ್ನಿನಲ್ಲಿ ಕಳೆದ 35 ದಿನಗಳ ಅನುಭವವನ್ನು ಎಳೆ ಎಳೆಯಾಗಿ ವಿವರಿಸಿದರು. ಅಲ್ಲಿನ ಸುಂದರವಾದ ರಸ್ತೆಗಳು, ಎಲ್ಲಿ ನೋಡಿದರೂ ಒಂದು ತುಣುಕೂ ಕಸವಿಲ್ಲದಿರುವುದು, ಕಾರಿನಲ್ಲಿನ ನ್ಯಾವಿಗೇಟರ್ ಉಪಕರಣ, ಅದರಲ್ಲಿ ತಾವು ಹೋಗುವ ಸ್ಥಳದ ಹೆಸರನ್ನು ಟೈಪಿಸಿದರೆ ಸಾಕು ಅದು ಮಾತಿನ ಮೂಲಕ ನೇರ, ಎಡಕ್ಕೆ, ಬಲಕ್ಕೆ ಎಂದು ಹೇಳುತ್ತಾ ದಾರಿ ತೋರುವ ಕ್ರಮ, ವಯಸ್ಸಾದವರು ಬಸ್ಸು ಇಳಿಯುವಾಗ ಬಸ್ಸಿನ ಮೆಟ್ಟಿಲು ಕುಸಿದು ರಸ್ತೆಯ ಮಟ್ಟಕ್ಕೆ ಬರುವುದು ಹೀಗೆ ವಿವಿಧ ಅನುಭವಗಳನ್ನು ನಿರೂಪಿಸಿದರು.

ಅಲ್ಲಿನ ಮಕ್ಕಳು 18 ನೇ ವಯಸ್ಸಿಗೆ ತಂದೆ ತಾಯಿಯಿಂದ ಬೇರಾಗುತ್ತಾರೆ. ಅದಕ್ಕಾಗಿ ತಂದೆ ತಾಯಿಗಳು ನಾಯಿ ಬೆಕ್ಕುಗಳನ್ನು ಬಹಳ ಪ್ರೀತಿಯಿಂದ ಸಾಕುತ್ತಾರೆ. ಪಕ್ಕದ ಮನೆಯ ಬೆಕ್ಕಿಗೆ ಜಾಯಿಂಡೀಸ್ ಬಂದು ಅದಕ್ಕಾಗಿ ಖಚರ್ಾದ 70000 ರೂಪಾಯಿಯ ಬಗ್ಗೆಯೂ ಹೇಳಿದರು. ಅಲ್ಲಿನ ಯುವ ಗಂಡು ಹೆಣ್ಣುಗಳು ಅತ್ಯಂತ ಮುಕ್ತವಾಗಿ ಬದುಕುವುದು ತನಗೆ ಇಷ್ಟವಾಗಲಿಲ್ಲ ಎಂದರು. ಆದರೆ ಅಲ್ಲಿನ ಶಿಸ್ತು, ಪ್ರತಿಯೊಬ್ಬರೂ ಕಾನೂನಿಗೆ ಕೊಡುವ ಗೌರವ ತನಗೆ ಇಷ್ಟವಾಯಿತು ಎಂದು ಹೇಳಿದರು.

ಪ್ರೊ. ವಿಠಲ ನಾಯಕ್ ಸ್ವಾಗತಿಸಿದರು. ಎನ್.ಭವಾನಿಶಂಕರ್ ಶುಭಾಶಂಸನೆಗೈದರು. ಪ್ರಾಂಶುಪಾಲರಾದ ಪ್ರೊ. ವಿ.ಎನ್.ರಾಜನ್ರವರು ಒಬ್ಬಳೇ ಲಂಡನ್ನಿಗೆ ಹೋಗಿ ಬಂದಂತಹ ಧೈರ್ಯವನ್ನು ಶ್ಲಾಘಿಸಿದರು. ಗೋಪಾಲಕೃಷ್ಣ ಸಾಮಗರು ವಂದಿಸಿದರು. ಡಾ. ಪದ್ಮನಾಭಭಟ್ ಉಪಸ್ಥತರಿದ್ದರು.


ಶಿರ್ವ: ಟಿಸಿಲು ಕವನ ಸಂಕಲನ ಬಿಡುಗಡೆ



ಸಂತ ಮೇರಿಕಾಲೇಜಿನ ವಿದ್ಯಾಥರ್ಿಗಳಾದ ದರ್ಶನ್ ಬಿ.ಶೆಟ್ಟಿ ಮತ್ತುತನುಜಯರವರು ರಚಿಸಿದ 'ಟಿಸಿಲು' ಕವನ ಸಂಕಲನವನ್ನುಸಾಹಿತ್ಯ ಸಂಘದಕಾರ್ಯಕ್ರಮದಲ್ಲಿಪ್ರಾಧ್ಯಾಪಕರಾದ ಮೇಜರ್ ಪಾಸ್ಕಲ್ಡೇಸರವರು ಬಿಡುಗಡೆ ಮಾಡಿ ವಿದ್ಯಾಥರ್ಿಗಳಾದ ಸೃಜನಶೀಲತೆಯ ಬಗ್ಗೆ ಮೆಚ್ಚಿಕೆಯನ್ನು ವ್ಯಕ್ತಪಡಿಸಿದರು.ಕನ್ನಡಉಪನ್ಯಾಸಕರಾದಪ್ರೊ.ಯಶೋಧರವರು ಸಂಕಲನದಕವನಗಳ ಸೌಂದರ್ಯವನ್ನು ಪರಿಚಯಿಸಿದರು.ಪ್ರಾಂಶುಪಾಲರಾದ ಪ್ರೊ. ವಿ.ಎನ್.ರಾಜನ್ರವರುವಿದ್ಯಾಥರ್ಿ ಕವಿಗಳ ಸಾಧನೆಯ ಬಗ್ಗೆ ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿದರು.ಪ್ರೊ. ವಿಠಲ ನಾಯಕ್, ಪ್ರೊ. ಎನ್. ಭವಾನಿಶಂಕರ್, ಪ್ರೊ.ಸುಬ್ರಹ್ಮಣ್ಯರವರುಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



ಎನ್.ಭವಾನಿಶಂಕರ್‌ರವರ ಕೃತಿ ಬಿಡುಗಡೆ
“ಹೆಣ್ಣು ಮಕ್ಕಳಿಗೆ ಆಪ್ತ ಸಲಹೆ”
ಹೆಣ್ಣು ಮಕ್ಕಳಿಗೆ ದಾರಿ ದೀಪವಾಗುವ ಕೃತಿ



ಸಂತ ಮೇರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಎನ್.ಭವಾನಿಶಂಕರ್‌ವರು ರಚಿಸಿದ ಹೆಣ್ಣು ಮಕ್ಕಳಿಗೆ ಆಪ್ತ ಸಲಹೆ ಎಂಬ ಕೃತಿಯನ್ನು ತೆಂಕನಿಡಿಯೂರು ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರಾದ ಡಾ.ನಿಕೇತನರವರು ಬಿಡುಗಡೆಗೊಳಿಸಿದರು. ಅವರು ಮಾತನಾಡುತ್ತ ಈ ಪುಸ್ತಕವು ಹೆಣ್ಣು ಮಕ್ಕಳ ಋತುಸ್ರಾವದ ವೈಜ್ಞಾನಿಕ ವಿವರಗಳು, ಚಿಕ್ಕ ಹೆಣ್ಣು ಮಕ್ಕಳ ಬಗ್ಗೆ ತಂದೆ ತಾಯಿ ವಹಿಸಬೇಕಾದ ಎಚ್ಚರಿಕೆ, ಯೌವ್ವನಕ್ಕೆ ಬಂದ ಯುವತಿಯು ಪ್ರೇಮ ಮತ್ತು ಕಾಮದ ಮುಂದಿನ ದುಷ್ಪರಿಣಾಮಗಳನ್ನು ಅರ್ಥಮಾಡಿಕೊಂಡು ನಿರ್ವಹಿಸಬೇಕಾದ ಜವಾಬ್ದಾರಿ, ಗರ್ಭಧಾರಣೆಯ ಪ್ರತಿಯೊಂದು ಹಂತಗಳು, ಬಸಿರಿನೊಳಗಿನ ಮಗುವು ತನ್ನದೇ ಭಾವನೆಗಳೊಂದಿಗೆ ಬೆಳೆಯುವ ಮತ್ತು ಆಟವಾಡುವ ರೀತಿ, ಗರ್ಭಪಾತದ ಸಂದರ್ಭದಲ್ಲಿ ಮಗುವಿನ ಅಂಗಾಂಗಗಳನ್ನು  ಕತ್ತರಿಸಿ ಕೀಳುವಾಗ ಬಸಿರಿನೊಳಗಿನ ಮಗುವು ಅನುಭವಿಸುವ ಹಿಂಸೆಯನ್ನು ವಿವರವಾಗಿ ಪರಿಚಯಿಸುತ್ತದೆ.

ಡಾ. ಪದ್ಮನಾಭ ಭಟ್‌ವರು  ಮಾತನಾಡುತ್ತ ಈ ಕೃತಿಯು ಯುವತಿಯರು ತಮ್ಮ ಪ್ರೇಮ ಮತ್ತು ಮದುವೆಯ ವಿಷಯಕ್ಕೆ ಸಂಬಂಧಿಸಿದಂತೆ ತಂದೆ ತಾಯಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ನೆಲೆ, ವಿವಾಹದಲ್ಲಿ ಅಂತರ್ಜಾತೀಯ ಸಂಬಂಧಗಳನ್ನು ನಿರ್ವಹಿಸಬೇಕಾದ ರೀತಿ, ಮುಕ್ತ ಕಾಮದ ಅವಾಂತರಗಳು, ರೇಪ್ ಕುರಿತ ಇತ್ತೀಚಿನ ಕಾನೂನುಗಳು-ಈ ಎಲ್ಲವನ್ನು ಕೃತಿಯು ವಿಶದವಾಗಿ ಪರಿಚಯಿಸುತ್ತದೆ ಎಂದು ಹೇಳಿದರು. ನೂರಾರು ಚಿತ್ರಗಳಿರುವ ಈ ಕೃತಿಯು ಮಹಿಳಾ ವೈದ್ಯೆಯೋರ್ವರು ವೈದ್ಯಕೀಯ ನೆಲೆಯಲ್ಲಿ ವಿವರವಾಗಿ ಬರೆದಂತೆ ಕೃತಿಯಂತೆ ಇದು ಇದೆ ಎಂದು ಪ್ರಶಂಸಿಸಿದರು.


ಪ್ರಾಂಶುಪಾಲರಾದ ಪ್ರೊ. ವಿ.ಎನ್.ರಾಜನ್ರವರು ದಾರಿ ತಪ್ಪುತ್ತಿರುವ ಇಂದಿನ ಯುವತಿಯರಿಗೆ ಮತ್ತು ಹೆತ್ತವರಿಗೆ ಈ ಕೃತಿಯು ಒಂದು ದಾರಿದೀಪವಾಗಿದೆ ಎಂದು ಹೇಳಿದರು. ಕುಮಾರಿ ಶೋಭಾ ಸ್ವಾಗತಿಸಿದರು. ಸಾಹಿತ್ಯ ಸಂಘದ ನಿರ್ದೇಶಕರಾದ ಪ್ರೊ.ವಿಠಲನಾಯಕ್ ವಂದಿಸಿದರು. ರೈನಾ ಮಥಾಯ್ಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಶಿರ್ವ: ಎನ್.ಭವಾನಿಶಂಕರ್ರವರ ಕೃತಿ ಬಿಡುಗಡೆ
"ಇಂಗ್ಲಿಷ್ ಅಂದ್ರೆ ತುಂಬಾ ಸುಲಭ" 




ಸಂತ ಮೇರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಎನ್.ಭವಾನಿಶಂಕರ್ರವರು ರಚಿಸಿದ ಇಂಗ್ಲಿಷ್ ಅಂದ್ರೆ ತುಂಬಾ ಸುಲಭ ಎಂಬ ಕೃತಿಯನ್ನು ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಶ್ರೀಕಾಂತ್ ರಾವ್ ಅವರು ಬಿಡುಗಡೆಗೊಳಿಸಿದರು. ಅವರು ಮಾತನಾಡುತ್ತ ಈ ಪುಸ್ತಕವು ಕತೆ ಹೇಳಿದ ರೀತಿಯಲ್ಲಿ ಸ್ವಲ್ಪವೂ ಬೋರಾಗದಂತೆ ಇಂಗ್ಲೀಷನ್ನು ಕಲಿಸುತ್ತದೆ. ಕಥನ ಕ್ರಮದಲ್ಲಿ ಮಾಡಿದ ನಿರೂಪಣೆಯೇ ಈ ಪುಸ್ತಕದ ವಿಶೇಷ. ಇಂಗ್ಲೀಷಿನ ಕಲಿಕೆಗೆ ಬೇಕಾದ ಎಲ್ಲವೂ ಇಲ್ಲಿನ 280 ಪುಟಗಳಲ್ಲಿದೆ. ಇದರ ಜೊತೆಗೆ ವಿರುದ್ಧಾರ್ಥಕ ಪದಗಳು, ಸಮಾನಾರ್ಥಕ ಪದಗಳು, ಇಂಗ್ಲಿಷ್ ನುಡಿಗಟ್ಟುಗಳು-ಇವುಗಳಿಗೆ ಕನ್ನಡ ಅನುವಾದ, ಪ್ರಾಣಿ, ಪಕ್ಷಿ, ದೇಹದ ಅಂಗಗಳಂತಹ ಹತ್ತಾರು ವಿಷಯಗಳ ಇಂಗ್ಲಿಷ್ ಪದಗಳು ಮತ್ತು ಅವುಗಳಿಗೆ ಕನ್ನಡದಲ್ಲಿ ಅರ್ಥ ಇಲ್ಲಿದೆ. ಇಂಗ್ಲಿಷ್ ಕವನ, ಕಾದಂಬರಿಗಳ ತುಣುಕುಗಳ ಕನ್ನಡಾನುವಾದ ಮತ್ತು ಮಾತನಾಡುವ ಇಂಗ್ಲೀಷಿನ 5000 ಕ್ಕೂ ಹೆಚ್ಚು ಇಂಗ್ಲಿಷ್ ವಾಕ್ಯಗಳು ಮತ್ತು ಅದರ ಕನ್ನಡಾನುವಾದವನ್ನು ನೀಡಲಾಗಿದೆ. ಇವುಗಳೊಂದಿಗೆ ಅರ್ಥಪೂರ್ಣವಾದ 200 ಕ್ಕೂ ಹೆಚ್ಚು ಚಿತ್ರಗಳಿವೆ.

ಸಾಹಿತ್ಯ ಸಂಘದ ಆಶ್ರಯದಲ್ಲಿ ಈ ಕಾರ್ಯಕ್ರಮವು ನಡೆಯಿತು. ಪ್ರಾಂಶುಪಾಲರಾದ ಪ್ರೊ.ವಿ.ಎನ್.ರಾಜನ್ರವರು ಕಂಪ್ಯೂಟರ್, ಇಂಟರ್ನೆಟ್, ವೆಬ್ಸೈಟ್, ವ್ಯಕ್ತಿತ್ವ ವಿಕಸನ, ಮಕ್ಕಳಿಗಾಗಿ ವಿಜ್ಞಾನ ಕವನಗಳು, ಕಾನೂನು, ಭಗವದ್ಗೀತೆ, ಕಾರ್ಡ್ರೈವಿಂಗ್ನಂತಹ ಬೇರೆ ಬೇರೆ ರೀತಿಯ 20 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ ಲೇಖಕರಿಗೆ ಶುಭವನ್ನು ಹಾರೈಸಿದರು. ಡಾ. ಪದ್ಮನಾಭ ಭಟ್ರವರು ಸ್ವಾಗತಿಸಿದರು. ಸಾಹಿತ್ಯ ಸಂಘದ ನಿದರ್ೇಶಕರಾದ ಪ್ರೊ. ವಿಠಲ ನಾಯಕ್ ವಂದಿಸಿದರು. ಎಡ್ಲಿನ್ ಪಿರೇರವರು ಕಾರ್ಯಕ್ರಮವನ್ನು ನಿರೂಪಿಸಿದರು.



ಶಿರ್ವ: ಎನ್.ಭವಾನಿಶಂಕರ್ರವರ ಕೃತಿ ಬಿಡುಗಡೆ
ವಿವಿಧ ಪ್ರಕಾರದ ನಟನೆಗಳ ಕಲಿಕೆಯ ಯಶಸ್ವೀ ಕೃತಿ-ಡಾ. ಗಣನಾಥ ಎಕ್ಕಾರು


ಎನ್.ಭವಾನಿಶಂಕರ್ರವರ ನೂತನ ಕೃತಿಯಾದ ನಟನೆ ಕಲಿಯಿರಿ ಎಂಬ ಕೃತಿಯನ್ನು ತೆಂಕನಿಡಿಯೂರಿನ ಪ್ರಥಮ ದಜರ್ೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಗಣನಾಥ ಎಕ್ಕಾರ್ರವರು ಬಿಡುಗಡೆ ಮಾಡಿದರು. ಕೃತಿಯನ್ನು ಬಿಡುಗಡೆ ಮಾಡಿದ ಅವರು ಎನ್.ಭವಾನಿಶಂಕರ್ರವರ ಈ ಕೃತಿಯು ಅತ್ಯಂತ ಸರಳವಾದ ಭಾಷೆಯಲ್ಲಿದ್ದು ನಾಟಕದ ನಟನೆ, ಸಿನಿಮಾದ ನಟನೆ, ಯಕ್ಷಗಾನ, ಬೀದಿ ನಾಟಕಗಳ ನಟನೆ, ಹರಿಕತೆ, ತಾಳಮದ್ದಳೆಗಳ ವಾಚಿಕಾಭಿನಯದ ನಟನೆಗಳ ರೀತಿಯನ್ನು ಅತ್ಯಂತ ಸುಂದರವಾಗಿ ಪರಿಚಯಿಸಿದೆ. ಅವರು ವಿವಿಧ ಪ್ರಕಾರದ ನಟನೆಗಳನ್ನು ಪರಸ್ಪರ ಹೋಲಿಸಿ (ನಾಟಕದ ನಟನೆ-ಸಿನಿಮಾದ ನಟನೆಗಳ.... ಹೋಲಿಕೆ, ವ್ಯತ್ಯಾಸ) ಅವುಗಳ ವಿಶೇಷತೆಗಳನ್ನು ಪರಿಚಯಿಸುತ್ತಾರೆ. ಪಶ್ಚಿಮದ ಸ್ಟಾನಿಸ್ಲಾವ್ಸ್ಕಿ, ಪೂರ್ವದ ಭರತನ ನಾಟ್ಯಶಾಸ್ತ್ರದಿಂದ ಹಿಡಿದು ಬೇರೆ ಬೇರೆ ನಟನೆಯ ಸಿದ್ಧಾಂತಗಳನ್ನು ಪರಿಚಯಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ನಟನೆಯನ್ನು ಕಲಿಸುವ ಆಟಗಳನ್ನು ಸ್ವಾರಸ್ಯಕರವಾದ ರೀತಿಯಲ್ಲಿ ನಿರೂಪಿಸಿ, ನಟನೆಯ ಪಾರಿಭಾಷಿಕ ಕೋಶವನ್ನು ನೀಡಿದ್ದಾರೆ. ನಟನೆಯನ್ನು ಕಲಿಯುವವರಿಗೆ ಇದು ಒಂದು ಕೈಗನ್ನಡಿ. ಅಂತಿಮವಾಗಿ ನಟನೆಯಿಂದ ವ್ಯಕ್ತಿತ್ವ ವಿಕಸನ ಸಾಧ್ಯವಾಗುವ ರೀತಿಯನ್ನು ಅತ್ಯಂತ ವಿವರವಾಗಿ  ಪರಿಚಯಿಸಿದ್ದಾರೆ. 
ಶುಭಾಶಂಸನೆಗೈದ ಡಾ.ಪದ್ಮನಾಭ ಭಟ್ರವರು ಭವಾನಿಶಂಕರ್ರವರ ಕಂಪ್ಯೂಟರ್, ಇಂಟರ್ನೆಟ್, ನೆಟ್ವಕರ್ಿಂಗ್, ಕಾರ್ ಡ್ರೈವಿಂಗ್, ಭಗವದ್ಗೀತೆ, ಮಹಾಭಾರತ, ಕಾನೂನು, ಮಕ್ಕಳ ಕವನಗಳಂತಹ 20 ಕ್ಕೂ ಹೆಚ್ಚು ವಿವಿಧ ವಿಷಯಗಳ ಕೃತಿಗಳ ಮೂಲಕ ಸಾಮಾನ್ಯ ಜನರಲ್ಲಿ ಕುಶಲತೆಯ ಕಲಿಕೆ ಮತ್ತು ಮೌಲ್ಯ ಪ್ರಜ್ಞೆಯನ್ನು ಅರಳಿಸಿದ್ದಾರೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿ.ಎನ್.ರಾಜನ್ರವರು ಎನ್.ಭವಾನಿಶಂಕರ್ರವರು ತಮ್ಮ ವಿಶಿಷ್ಟವಾದ ವಸ್ತು  ಮತ್ತು ಸರಳವಾದ ಶೈಲಿಯ ಮೂಲಕ ಕನ್ನಡದ ಅತ್ಯುತ್ತಮ ಲೇಖಕರಾಗಿದ್ದಾರೆ ಎಂದು ಹೇಳುತ್ತ ಶುಭ ಹಾರೈಸಿದರು. ಸಾಹಿತ್ಯ ಸಂಘದ ನಿದರ್ೇಶಕರಾದ ಪ್ರಾಧ್ಯಪಕ ವಿಠಲ ನಾಯಕ್ ಸ್ವಾಗತಿಸಿದರು. ವಿದ್ಯಾಥರ್ಿ ಪ್ರತಿನಿಧಿಗಳಾದ ಶಾಈನ್ ಮತ್ತು ತನುಜಯ ಉಪಸ್ಥಿತರಿದ್ದರು. ಶೈನಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.  


'ಮಕ್ಕಳಿಗಾಗಿ ವಿಜ್ಞಾನ ಕವನಗಳು'
 ಶಿರ್ವ: ಎನ್.   ಭವಾನಿಶಂಕರ್‌ರವರ ಮಕ್ಕಳ ಮನಸ್ಸಿಗೆ ಇಲ್ಲಿದೆ ಮದ್ದು ಕೃತಿ ಬಿಡುಗಡೆ



ಎನ್.ಭವಾನಿಶಂಕರ್‌ರವರ ನೂತನ ಕೃತಿಯಾದ ಮಕ್ಕಳ ಮನಸ್ಸಿಗೆ ಇಲ್ಲಿದೆ ಮದ್ದು ಎಂಬ ಕೃತಿಯನ್ನು ಮಂಗಳೂರು ವಿವಿ ಕನ್ನಡ ಪ್ರಾಧ್ಯಾಪಕರ ಸಂಘದ ಅಧ್ಯಕ್ಷರಾದ ಪ್ರೊ. ಪಿ. ಕೃಷ್ಣಮೂರ್ತಿಯವರು ಬಿಡುಗಡೆ  ಮಾಡಿದರು. ಕೃತಿಯನ್ನು ಬಿಡುಗಡೆ ಮಾಡಿದ ಅವರು ಎನ್.ಭವಾನಿಶಂಕರ್‌ರವರ ಮಕ್ಕಳ ಕವನಗಳ ಈ ಕೃತಿಯು ಬಹಳ ಅಪರೂಪದ ಕೃತಿಯಾಗಿದೆ. ಆಕಾಶ ಸುತ್ತುವ ಸ್ಯಾಟಲೈಟುಗಳು, ಬಾಹ್ಯಾಕಾಶದ ಮನೆಯೊಳಗೆ, ಭೂಮಿಯು ತಿರುಗುತ್ತಿದ್ದರೂ ನಮಗೇಕೆ ತಿಳಿಯುವುದಿಲ್ಲ, ನ್ಯೂಯಾಕರ್ಿನ ಮೇಲೆ ವಿಮಾನ ನಿಂತರೆ, ಟೀವಿಯಲ್ಲಿ ಚಿತ್ರ ಬರುವುದು ಹೇಗೆ?, ಕಂಪ್ಯೂಟರ್ ಎಂದರೇನು, ಇದರಲ್ಲಿ ಕಂಬಳಿ ಹುಳ ಚಿಟ್ಟೆಯಾಗುವುದು, ಬಾವಲಿಯ ಕಿವಿಯಿಂದ ಹುಟ್ಟಿದ ರಾಡಾರ,......ಎನ್ನುವಂತಹ ವಿಜ್ಞಾನ ಕವನಗಳನ್ನು ಮೊಟ್ಟ ಮೊದಲಿಗೆಂಬಂತೆ ಬರೆದಿದ್ದಾರೆ. ಅತ್ಯಂತ ಕ್ಲಿಷ್ಟವಾದ ಆಧುನಿಕವಾದ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಗತಿಗಳನ್ನು ಸರಳಗೊಳಿಸಿ ಕನ್ನಡದ ಕವನವಾಗಿಸಿದ್ದಾರೆ. 

ಇದರ ಜೊತೆಗೆ ಈ ಪುಸ್ತಕದಲ್ಲಿ  ಆಲಿಬಾಬಾ, ಸಮುದ್ರದ ಮೇಲೆ ಹಾರಿದ ಡೆಡಾಲಸ್, ಮುಟ್ಟಿದ್ದೆಲ್ಲ ಚಿನ್ನವಾಗಲಿ ಎಂಬ ಮಿಡಾಸ, ಕಟ್ಟಿಗೆ ಮಾರುವ ಬಡವ, ಪುಣ್ಯಕೋಟಿ,...... ರೀತಿಯ ಕಥಾ ಕವನಗಳು ಮತ್ತು ಹುಳಿ ದ್ರಾಕ್ಷಿ, ನೀರಿಗೆ ಕಲ್ಲು ಹಾಕಿದ ಕಾಗೆ, ಚಿನ್ನದ ಮೊಟ್ಟೆಯ ಬಾತುಕೋಳಿ, ಮೊಲವೂ ಸಿಂಹವೂ ಬಾವಿಯೂ, ಮಂಗನ ಬಾಲ ಚಟ್ನಿ.... ಯಂತಹ ಪ್ರಾಣಿ ಕವನಗಳು ಅತ್ಯಂತ ಚೆನ್ನಾಗಿ ಮೂಡಿ ಬಂದಿವೆ. ಇಲ್ಲಿಯ ಕವನಗಳಲ್ಲಿ ಆಕರ್ಷಕ ಲಯವಿದೆ, ಅಭಿನಯವಿದೆ, ಸರಳತೆ ಇದೆ ಎಂದು ಹೇಳಿದರು.

ಪ್ರಾಂಶುಪಾಲರಾದ ಪ್ರೊ. ವಿ.ಎನ್. ರಾಜನ್ರವರು  ಮಾತನಾಡುತ್ತ ಕಂಪ್ಯೂಟರ್, ಇಂಟರ್ನೆಟ್, ಕಾನೂನು, ಕಾರಿನ ತಂತ್ರಜ್ಞಾನ, ವೆಬ್ಸೈಟು, ಕತೆ ಬರೆಯುವ ಕಲೆ, ಭಗವದ್ಗೀತೆ, ಮಹಾಭಾರತದಂತಹ..... ಕೃತಿಗಳನ್ನು ಬರೆದ ಎನ್.ಭವಾನಿಶಂಕರ್‌ರವರ ಬಹುಮುಖ ಪ್ರತಿಭೆಯ ಬಗ್ಗೆ ಮೆಚ್ಚಿಕೆಯನ್ನು ವ್ಯಕ್ತಪಡಿಸಿದರು. ವಿಜ್ಞಾನ ಕವನಗಳು, ಕಥಾ ಕವನಗಳು, ಪ್ರಾಣಿ ಕವನಗಳ ಈ ಸಂಕಲನ ಸಂಗ್ರಹ ಯೋಗ್ಯವಾದ ಕೃತಿ ಎಂದು ಹೇಳುತ್ತ  ಶ್ರೀ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಶುಭಾಶಂಸನೆಗೈದರು. ಡಾ. ಪದ್ಮನಾಭ ಭಟ್ ಸ್ವಾಗತಿಸಿದರು. ಪ್ರೊ. ಗೋಪಾಕೃಷ್ಣ ಸಾಮಗ ವಂದಿಸಿದರು.

       


ವೆಬ್‌ಸೈಟುಗಳಿಂದ ಜ್ಞಾನ ಪಡೆಯುವುದು ಹೇಗೆ ಮತ್ತು ನೆಟ್‌ವರ್ಕಿಂಗ್ ಕೃತಿ ಬಿಡುಗಡೆ


ಎನ್.ಭವಾನಿಶಂಕರ್‌ರವರ ನೂತನ ಕೃತಿಯಾದ ವೆಬ್‌ಸೈಟುಗಳಿಂದ ಜ್ಞಾನ ಪಡೆಯುವುದು ಹೇಗೆ? ಮತ್ತು ನೆಟ್ ವರ್ಕಿಂಗ್ ಎಂಬ ಕೃತಿಯನ್ನು ಪ್ರೊ. ಪ್ರೀಮಾ ಡಿಸೋಜರವರು ಬಿಡುಗಡೆ ಮಾಡಿದರು. ಕೃತಿಯನ್ನು ಬಿಡುಗಡೆ ಮಾಡಿದ ಅವರು ಈ ಕೃತಿಯು ಇಂಟರ್‌ನೆಟ್ ಲೋಕದ ಅತ್ಯಾಧುನಿಕವಾದ ಜ್ಞಾನವನ್ನು ನೀಡುತ್ತದೆ ಎಂದು ತಿಳಿಸಿದರು. ಈ ಕೃತಿಯಲ್ಲಿ ಉದ್ಯೋಗಕ್ಕಾಗಿ ಆನ್‌ಲೈನ್ ಅರ್ಜಿ, ಆನ್‌ಲೈನ್ ಬ್ಯಾಂಕಿಂಗ್, ಇಂಟರ್‌ನೆಟ್‌ನ ಚರ್ಚಾ ವೇದಿಕೆಗಳು, ಕ್ಲೌಡ್ ಕಂಪ್ಯೂಟಿಂಗ್, ಸರ್ಚ್ ಇಂಜಿನ್‌ನ ಹುಡುಕುವ ವಿಧಾನ, ಗೂಗಲ್ ಮ್ಯಾಪ್ ನೋಡುವ ರೀತಿ, ಆನ್‌ಲೈನ್ ಶೇರು ಮಾರುಕಟ್ಟೆ, ಆನ್‌ಲೈನ್ ರೈಲ್ವೆ ಟಿಕೆಟ್ ರಿಸರ್ವೇಶನ್, ಸ್ಯಾಟಲೈಟ್ ಇಂಟರ್‌ನೆಟ್, ಡ್ರಾಪ್ ಬಾಕ್ಸ್ ಇತ್ಯಾದಿ ವಿಷಯಗಳನ್ನು ಸರಳವಾದ ಭಾಷೆಯಲ್ಲಿ ನಿರೂಪಿಸಿದ್ದಾರೆ ಎಂದು ಹೇಳಿದರು.
ವೆಬ್‌ಸೈಟುಗಳಿಂದ ಜ್ಞಾನ ಪಡೆಯುವುದು ಹೇಗೆ? ಮತ್ತು ನೆಟ್ ವರ್ಕಿಂಗ್ ಎಂಬ ಕೃತಿಯ ಎರಡನೆಯ ಭಾಗದಲ್ಲಿರುವ ಕಂಪ್ಯೂಟರುಗಳನ್ನು ಜೋಡಿಸುವ ನೆಟ್‌ವರ್ಕಿಂಗ್ ತಂತ್ರಕ್ಕೆ ಸಂಬಂಧಿಸಿದಂತೆ, ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ಸಹಾಯಕವಾಗುವ ವಿಷಯಗಳಾದ ಲೋಕಲ್ ಏರಿಯಾ ನೆಟ್‌ವರ್ಕ್, ರೌಟರ್, ಸ್ವಿಚ್, ಗೇಟ್ ವೆ, ಐಪಿ ಅಡ್ರೆಸ್, ಬ್ರಿಜ್, ಸಬ್‌ನೆಟ್ ಮಾಸ್ಕ್, ಸರ್ವರ್, ವಿ‌ಓ‌ಐಪಿ ಇತ್ಯಾದಿ ವಿಷಯಗಳನ್ನು ಸಾಮಾನ್ಯರೂ ಗ್ರಹಿಸುವಂತೆ ನಿರೂಪಿಸಿದ್ದಾರೆ ಎಂದು ಪ್ರೊ. ಸುಬ್ರಹ್ಮಣ್ಯ ಹೇಳಿದರು.         

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪದ್ಮನಾಭಭಟ್‌ರವರು ಎನ್.ಭವಾನಿಶಂಕರ್‌ರವರು ಬರೆದಿರುವ ಕೃತಿಗಳಾದ ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ, ಇಂಟರ್‌ನೆಟ್ ಕಲಿಯಿರಿ, ನಿಮ್ಮನ್ನು ರಕ್ಷಿಸುವ ಕಾನೂನುಗಳು, ಕಾರ್ ಡ್ರೈವಿಂಗ್ ಮತ್ತು ನಿರ್ವಹಣೆ, ಕತೆ ಬರೆಯುವುದು ಹೇಗೆ, ನಗು ಮತ್ತು ಆರೋಗ್ಯ, ಗೆಲ್ಲುವ ದಾರಿಗಳು ಇಲ್ಲಿವೆ, ಸಂಪೂರ್ಣ ಮಹಾಭಾರತ, ಮಕ್ಕಳಿಗಾಗಿ ವಿಜ್ಞಾನ ಕವನಗಳು, ಸರಳ ಭಗವದ್ಗೀತೆ ಇತ್ಯಾದಿ ಕೃತಿಗಳು ಅತ್ಯಂತ ಉಪಯುಕ್ತವಾದುದಾಗಿವೆ ಮಾತ್ರವಲ್ಲದೆ ವಿವಿಧ ಜ್ಞಾನ ಕ್ಷೇತ್ರಗಳ ಬಗ್ಗೆ ಅವರಿಗಿರುವ ಆಸಕ್ತಿಯನ್ನು ತಿಳಿಸುತ್ತದೆ ಎಂದು ಹೇಳಿದರು. ಸ್ವಾತಿ ಸ್ವಾಗತಿಸಿದರು. ಪ್ರೊ. ವಿಠಲ್ ನಾಯಕ್ ವಂದಿಸಿದರು.

ಎನ್.ಭವಾನಿಶಂಕರ್‌ರವರ ಸಂಪೂರ್ಣ ಮಹಾಭಾರತ ಕೃತಿ ಬಿಡುಗಡೆ



ಎನ್.ಭವಾನಿಶಂಕರ್‌ರವರ ನೂತನ ಕೃತಿಯಾದ ಸಂಪೂರ್ಣ ಮಹಾಭಾರತ ವನ್ನು ಕಾದಂಬರಿಕಾರರು ಮತ್ತು ಕತೆಗಾರರಾದ ಶ್ರೀಮತಿ ಕಾತ್ಯಾಯಿನಿ ಕುಂಜಿಬೆಟ್ಟು ಅವರು ಬಿಡುUಡೆ ಮಾಡಿದರು. ಮಹಾಭಾರತದ ೧೮ ಆಶ್ವಾಸಗಳ ಕತೆಯಲ್ಲಿ ಏನನ್ನೂ ಬಿಡದೆ, ಎಲ್ಲವನ್ನೂ ಸಂಕ್ಷೇಪಗೊಳಿಸಿ, ಓದಿಸಿಕೊಂಡು ಹೋಗುವಂತೆ ರೋಚಕವಾಗಿ ಬರೆದಿದ್ದಾರೆ. ಇಡೀ ಕತೆಯನ್ನು ಕೇವಲ ನೂರರಷ್ಟು ಪುಟಗಳಲ್ಲಿ ಸೆರೆ ಹಿಡಿದು ಸಂಕ್ಷಿಪ್ತಗೊಳಿಸಿರುವುದು ಆಸಕ್ತಿಯನ್ನು ಹುಟ್ಟಿಸಿದೆ. ಲೇಖಕರು ಮಹಾಭಾರತದ ಕತೆಯನ್ನು ಹೇಳುತ್ತಲೆ ಅದರ ಜೊತೆಗೆ ತಮ್ಮ ಅಭಿಪ್ರಾಯ, ವಿಡಂಬನೆ ಮತ್ತು ಹಿತವಚನವನ್ನೂ ಸೇರಿಸಿದ್ದಾರೆ. ಮಹಾಭಾರತದ ಯುದ್ಧದ ಅನಂತರದ ದುರಂತದ ವಿವರಗಳು ಯುದ್ಧದ ಪರಿಣಾಮವನ್ನು ಅತ್ಯಂತ ಚೆನ್ನಾಗಿ ಚಿತ್ರಿಸಿದೆ. ವಿಶೇಷವಾಗಿ ಮಕ್ಕಳು ಮತ್ತು ಶಿಕ್ಷಕರು ಓದಲೇಬೇಕಾದ ಕೃತಿ ಇದಾಗಿದೆ ಎಂದರು.
ಪ್ರಾಂಶುಪಾಲರಾದ ಡಾ. ಕ್ಲಾರೆನ್ಸ್‌ಮಿರಾಂಡರವರು ಮಾತನಾಡುತ್ತ ಈ ಕೃತಿಯಲ್ಲಿ ಮಹಾಭಾರತದ ಕತೆಯು ನಡೆದ ಉತ್ತರ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನದ ಭೂಪಟವನ್ನು ಸ್ವತಃ ಲೇಖಕರೇ ನಿರ್ಮಿಸಿದ್ದಾರೆ. ಇದರಲ್ಲಿರುವ ಮಹಾಭಾತದ ಕತೆಯು ನಡೆದ ಎಲ್ಲಾ ಸ್ಥಳಗಳು ಈಗ ಎಲ್ಲಿವೆ ಎಂಬ ವಿವರಣೆ ಓದುಗರಿಗೆ ಮತ್ತು ಶಿಕ್ಷಕರಿಗೆ ಅತ್ಯಂತ ಉಪಯುಕ್ತವಾದುದಾಗಿದೆ. ಇದರ ಜೊತೆಗೆ ಮಹಾಭಾರದ ಕತೆಯು ನಡೆದ ಕಾಲದ ವಿವರಗಳನ್ನೂ ಅವರು ನೀಡಿರುವುದು ಕೃತಿಗೆ ಹೊಸ ಸೊಬಗನ್ನು ನೀಡಿದೆ ಎಂದು ಹೇಳಿದರು.   
ಸ್ವಾಗತಿಸಿದ ಡಾ. ಎಸ್. ಪದ್ಮನಾಭಭಟ್‌ರವರು ಮಾತನಾಡುತ್ತ ಕಂಪ್ಯೂಟರ್, ಕಾರ್ ಡ್ರೈವಿಂಗ್, ಕಾನೂನಿನಂತಹ ಪುಸ್ತಕಗಳನ್ನು ಬರೆದ ಅವರು ಈ ಕೃತಿಯನ್ನು ಅವರ ಹಿಂದಿನ ಸರಳ ಭಗವದ್ಗೀತೆಯಂತೆ ಅತ್ಯಂತ ಸತಳವಾಗಿ ಬರೆದಿದ್ದಾರೆ ಎಂದರು. ಪ್ರೊ. ವಿಠಲನಾಯಕ್‌ರವರು ಸ್ವಾಗತಿಸಿದರು. ಅಶ್ವಿನ್ ಲಾರೆನ್ಸ್‌ರವರು ಕಾರ್ಯಕ್ರಮ ನಿರೂಪಿಸಿದರು.  ೧೧-೦೧-೨೦೧೩




ಎನ್.ಭವಾನಿಶಂಕರ್‌ರವರ ವಿನೂತನ ಕೃತಿ ಸರಳ ಭಗವದ್ಗೀತೆ ಬಿಡುಗಡೆ


ಎನ್.ಭವಾನಿಶಂಕರ್‌ರವರ ನೂತನ ಕೃತಿಯಾದ ಸರಳ ಭಗವದ್ಗೀತೆ ಯನ್ನು ಕಿನ್ನಿಗೋಳಿಯ ಪೋಂಪೈ ಕಾಲೇಜಿನ ಡಾ. ರಾಧಾಕೃಷ್ಣ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತ ಈ ಭಗವದ್ಗೀತೆಯು ಸರಳವಾದ ಕನ್ನಡದಲ್ಲಿದ್ದು ಓದಿಸಿಕೊಂಡು ಹೋಗುವ ಹೊಸ ರೀತಿಯ ರಚನೆಯಾಗಿದೆ. ಅರ್ಜುನನು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ. ಕೃಷ್ಣ ಅವನಲ್ಲಿನ ಆತ್ಮ ವಿಶ್ವಾಸವನ್ನು ಬಡಿದೆಬ್ಬಿಸಿ ಧೈರ್ಯ ತುಂಬುವ ವಿಷಯವು ಮನೋವಿಜ್ಞಾನದ ನೆಲೆಯಲ್ಲಿ ನಿರೂಪಿತವಾಗಿದೆ. ಓದುಗನಲ್ಲಿ ಧೈರ್ಯ ತುಂಬುವ ರೀತಿಯಲ್ಲಿ ಈ ಪುಸ್ತಕವನ್ನು ಬರೆಯಲಾಗಿದೆ. ಇದು ಈ ಕೃತಿಯ ಹೆಗ್ಗಳಿಕೆ. ಇದು ಬಹಳ ಮುಖ್ಯವಾಗಿ ಆತ್ಮ ವಿಶ್ವಾಸವನ್ನು ತುಂಬುವ ಉದ್ದೇಶದಿಂದ ಬರೆದ ಧಾರ್ಮಿಕ ಕೃತಿಯಾಗಿದೆ ಎಂದರು.
ಪ್ರಾಂಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಮಾತನಾಡುತ್ತ ಲೇಖಕರು ಈ ಕೃತಿಯನ್ನು ಹೈಸ್ಕೂಲಿನ ವಿದ್ಯಾರ್ಥಿಗಳೂ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಬರೆದಿದ್ದಾರೆ. ವಜ್ರದಂತೆ ಕಠಿಣವಾಗಿ ಕಾಣುವ ಭಗವದ್ಗೀತೆಯನ್ನು ಹಿಮಾಲಯದ ತಂಪು ಗಂಗಾಜಲವಾಗಿಸಿದ್ದಾರೆ. ಬಿಸಿಲಿನ ಧಗೆಯೆಂಬ ಚಿಂತೆಯಲ್ಲಿ ಸೋತು ದಗ್ಧನಾದ ಶ್ರೀಸಾಮಾನ್ಯವಿಗೆ ಇದು ಪರಮ ತೀರ್ಥವೇ ಸರಿ. ಸುಮಾರು ನೂರು ಪುಟಗಳ ಈ ಪುಸ್ತಕದಲ್ಲಿ ಭಗವದ್ಗೀತೆಯ ಅರ್ಥವನ್ನು ತೆರೆದು ತೋರಿಸುವ ೮೦ ಕ್ಕೂ ಹೆಚ್ಚು ಚಿತ್ರಗಳನ್ನು ಲೇಖಕರು ರೂಪಿಸಿರುವುದು ಅದ್ಭುತವಾಗಿದೆ. ಪ್ರತಿಯೊಂದು ಪುಟದಲ್ಲೂ ಭಾರತೀಯ ಸಂಸ್ಕೃತಿಯ ಸ್ವರೂಪವನ್ನು ಬಿಂಬಿಸುವ ಸುಂದರವಾದ ಚಿತ್ರಗಳಿವೆ ಎಂದರು.
ಶುಭಾಶಂಸನೆಗೈದ ಡಾ. ಎಸ್. ಪದ್ಮನಾಭಭಟ್‌ರವರು ಮಾತನಾಡುತ್ತ ಈ ಕೃತಿಯು ಪದ್ಯ ಮತ್ತು ಗದ್ಯದ ಲಕ್ಷಣಗಳನ್ನು ಜೊತೆಗೂಡಿಸಿಕೊಂಡಿದ್ದು ಸುಲಭವಾಗಿ ಓದಿಸಿಕೊಂಡು ಹೋದ ಅನುಭವವನ್ನು ನನಗೆ ನೀಡಿತು. ಇದು ಅಪರೂಪದ ವಿಶಿಷ್ಟ ಕೃತಿ ಎಂದು ಹೇಳಿದರು. ಅಶ್ವಿನ್ ಲಾರೆನ್ಸ್ ಕರ್ನೇಲಿಯೋ ಸ್ವಾಗತಿಸಿದರು. ಈ ಪುಸ್ತಕವು ಅರ್ಪಿತಗೊಂಡ ಗ್ರಂಥಾಲಯದ ಶ್ರೀಮತಿ ಸುಜಾತ ಮತ್ತು ವಿಕ್ಟರ್ ಡಿಸೋಜ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ೧೮-೧೨-೧೨

Monday, August 6, 2012


ಕತೆಯನ್ನು ಹೇಗೆ ಬರೆಯಬೇಕು-ಶಿರ್ವದಲ್ಲಿ ಕಥಾ ಕಮ್ಮಟ



            ಕತೆ ಬರೆಯುವುದು ಪ್ರತಿಭೆಗೆ ಸಂಬಂಧಿಸಿದ ವಿಷಯ. ಹೀಗಿದ್ದರೂ ಅದರ ತಂತ್ರಗಳನ್ನು ಕಲಿಯಲು ಸಾಧ್ಯವಿದೆ. ಈ ತಂತ್ರಗಳನ್ನು ಪರಿಚಯಿಸುವುದಕ್ಕಾಗಿ ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಕಥಾ ಕಮ್ಮಟ ನಡೆಯಿತು.
            ಖ್ಯಾತ ಕತೆಗಾರರಾದ ಡಾ. ನಾ.ಮೊಗಸಾಲೆಯವರು ಕಥಾ ಕಮ್ಮಟವನ್ನು ಉದ್ಘಾಟಿಸಿದರು. ಬರಹಗಾರ ಸಂವೇದನಾಶೀಲನಾಗಿದ್ದರೆ ಅವನಿಗೆ ತನ್ನ ಸುತ್ತ ಮುತ್ತ ಮತ್ತು ಎಲ್ಲೆಲ್ಲೂ ಕತೆಗಳು ಕಾಣಿಸುತ್ತವೆ. ಅವುಗಳಿಗೆ ರೂಪು ಕೊಡುವುದು ಕತೆಗಾರನ ಕೆಲಸ ಎಂದು ಹೇಳಿದರು. ಡಾ. ಬಿ. ಜನಾರ್ಧನ ಭಟ್‌ರವರು ತರಬೇತಿ ನೀಡುತ್ತಾ ಕತೆಯು ನಿರ್ಮಾಣಗೊಳ್ಳುವ ರೀತಿಯನ್ನು ವಿಶ್ಲೇಷಿಸಿದರು.
            ಕಾದಂಬರಿಕಾರರಾದ ಕಾತ್ಯಾಯಿನಿ ಕುಂಜಿಬೆಟ್ಟುರವರು ಕಥಾ ಕಮ್ಮಟದ ಪ್ರಶ್ನೋತ್ತರ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತ ತನ್ನದೇ ಕಾದಂಬರಿಯಾದ ತೊಗಲುಗೊಂಬೆ ಯನ್ನು ಹೇಗೆ ಬರೆದೆ ಎಂಬುದನ್ನು ಪರಿಚಯಿಸಿದರು. ಕತೆಗೆ ನಾವು ಅನುಭವಿಸುವ ಜೀವನವೇ ವಸ್ತು. ಜೀವನದಲ್ಲಿ ಕಂಡದ್ದಕ್ಕೆ ಹೊಸತನ್ನು ಸೇರಿಸುವುದು ಕಲ್ಪನೆ. ಲೇಖಕನಿಗೆ ಇತರರ ಮನಸ್ಸಿನಲ್ಲಿ ನಡೆಯುವ ಕ್ರಿಯೆಯನ್ನು ಅನುಭವಿಸುವುದು ಸಾಧ್ಯವಾಗಬೇಕು. ಇದು ಸಂವೇದನಾಶೀಲತೆ. ಇಂತಹ ಸಂವೇದನೆ ಇರುವವನು ಕತೆಗಾರನಾಗುತ್ತಾನೆ ಎಂದು ಹೇಳಿದರು. ಕತೆಗಾರ್ತಿ ಪ್ರಜ್ಞಾ ಮಾರ್ಪಳ್ಳಿಯವರು ತಾವು ಬರೆದ ನಾನು ಮತ್ತು ಅವಳು ಕಥಾ ಸಂಕಲನದ ಕತೆಗಳು ಹುಟ್ಟಿಕೊಂಡ ರೀತಿಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಬಿಡುಗಡೆಯಾದ ಎನ್.ಭವಾನಿಶಂಕರ್‌ರವರ ಕತೆ ಬರೆಯುವುದು ಹೇಗೆ? ಎಂಬ ಕೃತಿಯು ಪ್ರತಿಯೊಂದು ಹಂತದಲ್ಲಿ ಕತೆಗಾರನಿಗೆ ವಿವರವಾದ ಮಾರ್ಗದರ್ಶನವನ್ನು ಯಾವ ರೀತಿಯಲ್ಲಿ ನೀಡುತ್ತದೆ ಎಂಬುದನ್ನು ಯುವ ಕತೆಗಾರ ಅಶ್ವಿನ್ ನೇರಿ ಕರ್ನೇಲಿಯೋರವರು ಪರಿಚಯಿಸಿದರು.
ಹಿರಿಯಡ್ಕದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಾದ ಕು|| ಚಂದ್ರಿಕಾ ನಾಗರಾಜ್‌ರವರು ತಾನು ಬರೆದು ಪ್ರಕಟಿಸಿದ ಕಥಾ ಸಂಕಲನ ದೂರಾಗೋ ಮುನ್ನ ದ ಕತೆಗಳನ್ನು ತಾನು ಹೇಗೆ ಬರೆದೆ ಎಂದು ವಿಶ್ಲೇಷಿಸಿದರು. ಇದೇ ರೀತಿಯಲ್ಲಿ ಡಾ. ಪದ್ಮನಾಭ ಭಟ್ ಮತ್ತು ಎನ್.ಭವಾನಿಶಂಕರ್ ತಾವು ಕತೆಗಳನ್ನು ಬರೆದ ಬಗ್ಗೆ ಹೇಳಿದರು. ಮಂಗಳೂರು ವಿವಿ ವ್ಯಾಪ್ತಿಯ ೬೦ ವಿದ್ಯಾರ್ಥಿಗಳು ಈ ಕಮ್ಮಟದಲ್ಲಿ ಭಾಗವಹಿಸಿದ್ದರು.   


ಎನ್.ಭವಾನಿಶಂಕರ್‌ರವರ ಕತೆ ಬರೆಯುವುದು ಹೇಗೆ?-ಕೃತಿ ಬಿಡುಗಡೆ



            ಶಿರ್ವದ ಸಂತ ಮೇರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಭವಾನಿಶಂಕರ್‌ರವರ ಕತೆ ಬರೆಯುವುದು ಹೇಗೆ? ಎಂಬ ಕೃತಿಯನ್ನು ಸಾಹಿತಿ ಡಾ. ನಾ.ಮೊಗಸಾಲೆ ಬಿಡುಗಡೆ ಮಾಡಿದರು.
            ಕೃತಿಯನ್ನು ಬಿಡುಗಡೆ ಮಾಡಿದ ಅವರು ಇದು ಕನ್ನಡಕ್ಕೆ ವಿಶಿಷ್ಟವಾದ ಅಪರೂಪದ ಕೃತಿ ಎಂದು ಹೇಳಿದರು. ಈ ಕೃತಿಯು ಸಣ್ಣ ಕತೆ, ಕಾದಂಬರಿ, ಮಕ್ಕಳ ಕತೆ, ಕಾರ್ಡಿನಲ್ಲಿ ಕತೆ, ಸಿನಿಮಾ ಕತೆಗಳನ್ನು ಬರೆಯುವ ವಿಧಾನವನ್ನು ಅತ್ಯಂತ ಸರಳವಾದ ಭಾಷೆಯಲ್ಲಿ ಪರಿಚಯಿಸುತ್ತದೆ. ಈ ಕೃತಿಯಲ್ಲಿ ಕತೆಯ ಭಾಗಗಳು, ಕತೆಯ ಆರಂಭ, ಕತೆಯಲ್ಲಿ ಕುತೂಹಲವನ್ನು ಕೆರಳಿಸಬೇಕಾದ ರೀತಿ, ನಿರೂಪಣಾ ಕ್ರಮ, ದೃಶ್ಯ ನಿರ್ಮಾಣ ಕ್ರಮ, ಪಾತ್ರಗಳ ವಿಧಗಳು ಇತ್ಯಾದಿ ವಿಷಯಗಳ ಬಗ್ಗೆ ಚೆನ್ನಾಗಿ ಬರೆದಿದ್ದಾರೆ. ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಉದಾಹರಣೆಗಳನ್ನು ನೀಡಿದ್ದಾರೆ. ಸನ್ನಿವೇಶ ಚಿತ್ರಣ, ಪಾತ್ರ ಚಿತ್ರಣ, ಕುತೂಹಲ ನಿರ್ಮಾಣ, ಆಲೋಚನೆ, ಕಥನ, ವರ್ಣನೆ, ಸಂಭಾಷಣೆಗಳಿಗೆ ಸಂಬಂಧಿಸಿದಂತೆ ಕನ್ನಡದ ಶ್ರೇಷ್ಠ ಕಾದಂಬರಿಗಳ ೨೦೦ಕ್ಕೂ ಹೆಚ್ಚು ಉದಾಹರಣೆಗಳನ್ನು ನೀಡಿದ್ದಾರೆ. ಈ ಕೃತಿ ಥಿಯರಿ ಮತ್ತು ಪ್ರಾಕ್ಟಿಕಲ್ ಎರಡೂ ವಿಷಯಗಳಿಗೆ ಸಂಬಂಧಿಸಿದಂತೆ ಸಶಕ್ತವಾಗಿದೆ ಎಂದರು.
            ಕಾಲೇಜಿನ ಪ್ರಾಂಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಓರ್ವ ಕನ್ನಡ ಪ್ರಾಧ್ಯಾಪಕರಾದ ಎನ್. ಭವಾನಿಶಂಕರ್‌ರವರು  ಕಂಪ್ಯೂಟರ್, ಇಂಟರ್‌ನೆಟ್, ಕಾರ್ ಡ್ರೈವಿಂಗ್, ಕಾನೂನು, ಮನಶ್ಯಾಸ್ತ್ರ, ವ್ಯಕ್ತಿತ್ವ ವಿಕಸನ, ಚುಟುಕು...ಈ ಯಾವುದೇ ವಿಷಯವನ್ನು  ಅತ್ಯಂತ ಸರಳವಾಗಿ ಬರೆಯುತ್ತಿರುವುದಕ್ಕಾಗಿ ಅಭಿನಂದಿಸಿದರು.
            ಸಭೆಯ ಅಧ್ಯಕ್ಷರಾದ ಸಂತ ಮೇರಿ ಸಂಸ್ಥೆಗಳ ಸಂಚಾಲಕರಾದ ವೆ.ರೆ.ಫಾ. ಸ್ಟಾನಿ ಟಾವ್ರೋರವರು ವಿಶಿಷ್ಟವಾದ ಪುಸ್ತಕವನ್ನು ಬರೆದಿರುವುದಕ್ಕಾಗಿ ಲೇಖಕರನ್ನು ಮತ್ತು ಕಾಲೇಜಿನ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ಪ್ರಾಂಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರನ್ನು ಅಭಿನಂದಿಸಿದರು.
            ಡಾ. ಪದ್ಮನಾಭ ಭಟ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಗೋಪಾಲಕೃಷ್ಣ ಸಾಮಗರು ವಂದಿಸಿದರು. ಅಶ್ವಿನ್ ಕರ್ನೇಲಿಯೋರವರು ಕಾರ್ಯಕ್ರಮ ನಿರ್ವಹಿಸಿದರು.


ಮಂಗಳೂರು ಹೋಮ್ ಸ್ಟೇ ದಾಳಿ-ತಪ್ಪು ಯಾರದು?



            ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಹೋಂಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ವಿಚಾರ ಸಂಕಿರಣ ನಡೆಯಿತು. ಎನ್.ಭವಾನಿಶಂಕರ್‌ರವರು ಈ ವಿಚಾರ ಸಂಕಿರಣದ ನಿರ್ವಾಹಕರಾಗಿದ್ದರು. ಅವರು ಮಾತನಾಡುತ್ತ ಇತ್ತೀಚೆಗೆ ಮಂಗಳೂರಿನ ಪಡೀಲ್‌ನಲ್ಲಿ ನಡೆದ ದಾಳಿಯು ರಾಷ್ಟ್ರೀಯ ಮಟ್ಟದಲ್ಲಿ ಸುದ್ಧಿಯಾಗಿ, ಕನ್ನಡದ ಟೆಲಿವಾಹಿನಿಗಳಲ್ಲಿ ನಿರಂತರ ಚರ್ಚೆಗೆ ವಿಷಯವಾಯಿತು. ಆ ಮೂಲಕ ಇಂದಿನ ಯುವಕರು ಪಾಲಿಸಬೇಕಾದ ಸಭ್ಯತೆ, ಸಂಸ್ಕೃತಿಯ ಹೆಸರಿನಲ್ಲಿ ದಾಳಿ ಮಾಡುವ ಗೂಂಡಾಗಳು, ರಾಜಕೀಯ ಪಕ್ಷಗಳ ಓಟಿನ ನೆಲೆಯ ದೃಷ್ಟಿಕೋನ, ಟೆಲಿವಾಹಿನಿಗಳ ಆತುರ ಮತ್ತು ಆವೇಶಗಳೆಂಬ ಅನೇಕ ಸಂಗತಿಗಳ ಬಗ್ಗೆ ಮರುಯೋಚನೆಗೆ ಅವಕಾಶ ಕಲ್ಪಿಸಿತು ಎಂದರು.
            ಪ್ರೊ. ಸುಬ್ರಹ್ಮಣ್ಯರವರು ಮಾತನಾಡುತ್ತ ಪಡೀಲ್‌ನಲ್ಲಿ ಸಂಸ್ಕೃತಿಯ ರಕ್ಷರೆಂದು ಹೇಳಿಕೊಳ್ಳುತ್ತ ಬರ್ತ್ ಡೇ ಪಾರ್ಟಿಯ ಹೆಣ್ಣು ಮಕ್ಕಳ ಮೈಮೇಲೆಲ್ಲ ತಮಗೆ ಬೇಕಾದಂತೆ ಕೈಯಾಡಿಸಿ ತೀಟೆ ತೀರಿಸಿಕೊಂಡ ಅಧರ್ಮೀ ಗೂಂಡಾಗಳ ಕೃತ್ಯವನ್ನು ಖಂಡಿಸಿದರು. ಸರಕಾರ ಮತ್ತು ಪೋಲಿಸ್ ಇಲಾಖೆ ತನ್ನ ಕರ್ತವ್ಯವನ್ನು ಮರೆತಾಗ, ದುರ್ಬಲವಾದ ಕಾನೂನುಗಳಿರುವಾಗ ಇಂತಹ ಘಟನೆಗಳು ಘಟಿಸುತ್ತವೆ ಎಂದರು.  
            ಡಾ ಪದ್ಮನಾಭಭಟ್‌ರವರು ಮಾತನಾಡುತ್ತ ಜಾಗತೀಕರಣ ಕೊಡಮಾಡಿದ ಮೊಬೈಲ್ ತಂತ್ರಜ್ಞಾನ, ಪಶ್ಚಿಮ ದೇಶಗಳ ಸ್ವಚ್ಛಂದ ಜೀವನದ ಆದರ್ಶ, ಯುವಜನರ ಕೈತುಂಬ ಹರಿಯುವ ಹಣ, ಪಬ್, ಹೋಮ್ ಸ್ಟೇ ಇತ್ಯಾದಿ ಅನೈತಿಕತೆಯ ಮೂಲಕ ಹಣ ಸಂಪಾದನೆಯೇ ಮುಖ್ಯವೆನ್ನುವ ವ್ಯಾಪಾರೀ ವರ್ಗ, ಏಕ ಕಾಲಕ್ಕೆ ಅಮಿತ ಸುಖವನ್ನು ಪಡೆಯಬೇಕು ಎಂಬ ಯುವಜನತೆ-ದರಂತಗಳಿಗೆ ಕಾರಣವಾಗುತ್ತಿದೆ ಎಂದರು.  
            ಪ್ರೊ.ವಿನ್ಸೆಂಟ್ ಡಿಸೋಜರವರು ಭಾರತೀಯ ಸಂಸ್ಕೃತಿಯ ಬೇರುಗಳನ್ನು ವಿಮರ್ಶೆಯ ನಿಕಷದೊಂದಿಗೆ ಕ್ರಿಯಾಶೀಲಗೊಳಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರೆ, ವಿದ್ಯಾರ್ಥಿ ಪ್ರತಿನಿಧಿಯಾದ ಅಶ್ವಿನ್ ಕರ್ನೇಲಿಯೋರವರು ಯುವಜನರಿಗೆ ಇರಬೇಕಾದ ನೈತಿಕ ಹೊಣೆಗಾರಿಕೆ ಮತ್ತು ಸಾಮಾಜಿಕಬದ್ಧತೆಯ ಬಗ್ಗೆ ಹೇಳಿದರು. ವಿದ್ಯಾರ್ಥಿನಿಯರಾದ ಜೆನಿಫರ್ ಮೃದುಲ ಆಳ್ವ ಮತ್ತು ಮಿಶೆಲ್ ಆಳ್ವರವರು ಸ್ತ್ರೀಸ್ವಾತಂತ್ರ್ಯ ಎಂದರೆ ಸ್ವಚ್ಛಂದತೆ ಅಲ್ಲ, ಅರಿವು, ನೈತಿಕತೆ ಮತ್ತು ಹೊಣೆಗಾರಿಕೆಯ ಜೀವನ ಶೈಲಿ ಎಂದರು. ಸಭೆಯಲ್ಲಿ ನೈತಿಕ ಗೂಂಡಾಗಳ ವರ್ತನೆಯನ್ನು ಖಂಡಿಸಲಾಯಿತು.
            ಪ್ರಾಂಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಚರ್ಚೆಯ ಬಹುಮುಖ ಆಯಾಮದ ಬಗ್ಗೆ ಮೆಚ್ಚಿಕೆ ವ್ಯಕ್ತಪಡಿಸಿದರು. ಲಾಯಲ್ ಕೊರೆಯ ಸ್ವಾಗತಿಸಿದರು, ಫ್ಲಾವಿನ್ ಡಿಸೋಜ ವಂದಿಸಿದರು.  



ಮಲ್ಲಿಕಾ-೨೦೧೨ ವಾರ್ಷಿಕಾಂಕ ಬಿಡುಗಡೆ



            ಶಿರ್ವದ ಸಂತ ಮೇರಿ ಕಾಲೇಜಿನ ವರ್ಷದ ಮ್ಯಾಗಜಿನ್-ವಾರ್ಷಿಕಾಂಕ-೨೦೧೨ ಎಂಬ ಕೃತಿಯನ್ನು ಸಾಹಿತಿಗಳಾದ ಉದಯಕುಮಾರ ಹಬ್ಬುರವರು ಬಿಡುಗಡೆ ಮಾಡಿದರು.
            ೨೦೧೧ರ ವಾರ್ಷಿಕಾಂಕವು ಮಂಗಳೂರು ವಿವಿಯಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿದ್ದು ಇದೀಗ ಬಂದಿರುವ ವಾರ್ಷಿಕಾಂಕ ೨೦೧೨ ಅಪೂರ್ವವಾದ ವೈವಿಧ್ಯತೆಯಿಂದ ಕೂಡಿದೆ ಎಂದರು. ವಿದ್ಯಾರ್ಥಿಯು ಕಾಪಿ ಹೊಡೆದು ಬರೆಯಲು ಅವಕಾಶವಿಲ್ಲದ ಹಾಗೆ ಈ ಕೃತಿಯು ರಚನೆಗೊಂಡಿದೆ. ಇದರಲ್ಲಿನ ಎಲ್ಲಾ ಲೇಖನಗಳು ವಿದ್ಯಾರ್ಥಿಯ ಸ್ವಾನುಭವ ಕಥನವಾಗಿದೆ. ವಿದ್ಯಾರ್ಥಿಗಳು ತಮ್ಮ ಊರಿನ ಸುತ್ತಲಿನ ವಿದ್ಯಮಾನದ ಬಗ್ಗೆ ಬರೆದಿದ್ದಾರೆ. ಅನೇಕ ವ್ಯಕ್ತಿಗಳ ಸಂದರ್ಶನ ಮಾಡಿದ್ದಾರೆ. ಇಲ್ಲಿಯ ಬರವಣಿಗೆಯು ಕಥನ ಶೈಲಿಯಿಂದ ಕೂಡಿದ್ದು ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ. ಒಬ್ಬ ವಿದ್ಯಾರ್ಥಿ ತನ್ನ ಬಡತನದ ಎಲ್ಲಾ ಆಯಾಮಗಳನ್ನು ಬರೆದು ಅದನ್ನು ಸವಾಲಾಗಿ ಸ್ವೀಕರಿಸುವ ಬಗ್ಗೆ ಬರೆದರೆ, ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೇ ಹೇರಲಾದ ಮದುವೆಯನ್ನು ಒಪ್ಪದೆ ತಾನು ವಿದ್ಯೆ ಕಲಿಯಬೇಕಾದ, ಕೆಲಸಕ್ಕೆ ಸೇರಬೇಕಾದ ಆಸೆಯನ್ನು ಗೆದ್ದುಕೊಂಡದ್ದರ ಬಗ್ಗೆ, ಇತರರು-ಮಡಿಕೇರಿಯ ಕೋಟೆ ಬೆಟ್ಟ ಹತ್ತಿದ್ದರ ಬಗ್ಗೆ, ಬೊಂಬಾಯಿಯ ಸ್ಲಂನಲ್ಲಿ ನಡೆದು ಹೋದ ಅನುಭವದ ಬಗ್ಗೆ, ಹುಡುಗಿಯೊಬ್ಬಳು ಹೈಸ್ಕೂಲಿನಲ್ಲಿ ಸೈಕಲ್‌ನ ಕಲಿಕೆ ತನ್ನ ಬದುಕಿನಲ್ಲಿ ತಂದ ಬದಲಾವಣೆಯ ಬಗ್ಗೆ, ದೋಣಿಯಲ್ಲಿನ ಪ್ರವಾಸ ಮತ್ತು ಕುದುರಿನ ಸಮಸ್ಯೆಗಳು, ಅಪಾರ್ಟ್‌ಮೆಂಟ್‌ನ ಬದುಕಿನ ರೀತಿ, ನಾಟಿಕೋಳಿಗಳ ಬದುಕಿನ ಶೈಲಿ, .....ಬಗ್ಗೆ ಬರೆದಿದ್ದಾರೆ. ಈ ಕೃತಿಯಲ್ಲಿ ...ಲೇಖನಗಳು ......ಕವನಗಳು ಇವೆ. ಇಡೀ ಕೃತಿಯ ಬೆರಳಚ್ಚು, ಪುಟ ವಿನ್ಯಾಸ, ಮುಖ ಪುಟ ವಿನ್ಯಾಸ ಮತ್ತು ಪುಟಗಳ ಜೋಡಣೆಯನ್ನು ಕಾಲೇಜಿನ ಸಿಬ್ಬಂದಿಗಳು ಮತ್ತು ಶಿಕ್ಷಕರು ಮಾಡಿದ್ದಾರೆ. ಪ್ರತಿಯೊಂದು ಲೇಖನಕ್ಕೂ ಅರ್ಥಪೂರ್ಣವಾದ ಫೋಟೋಗಳನ್ನು ಬಳಸಲಾಗಿದೆ ಎಂದರು.           
            ಕಾಲೇಜಿನ ಪ್ರಾಂಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಮಾತನಾಡುತ್ತ ಇಡೀ ಕೃತಿ ಕಾಲೇಜಿನಲ್ಲಿಯೇ ತಯಾರಾಗಿದ್ದು ಮುದ್ರಣ ಮಾತ್ರ ಹೊರಗೆ ನಡೆದಿದೆ ಎಂದರು. ಈ ಕೃತಿ ರಚನೆಯ ಹಿಂದೆ ಕನ್ನಡ ಪ್ರಾಧ್ಯಾಪಕರಾದ ಎನ್.ಭವಾನಿಶಂಕರ್ ಮತ್ತು ಇತರ ಸಂಪಾದಕರ ಪರಿಶ್ರಮವನ್ನು ಶ್ಲಾಘಿಸಿದರು. 
            ಡಾ. ಪದ್ಮನಾಭ ಭಟ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಎನ್.ಭವಾನಿಶಂಕರ್ ಶ್ಲಾಘಿಸಿದರು. ಪ್ರೊ. ಗೋಪಾಲಕೃಷ್ಣ ಸಾಮಗ ವಂದಿಸಿದರು. ಶ್ವಿನ್ ಲಾರೆನ್ಸ್ ಕಾರ್ಯಕ್ರಮ ನಿರ್ವಹಿಸಿದರು.

Saturday, February 11, 2012


ಎನ್.ಭವಾನಿಶಂಕರ್‌ರವರ ನಗಿಸುವ ಕವನಗಳು-ಕೃತಿ ಬಿಡುಗಡೆ

          ಶಿರ್ವದ ಸಂತ ಮೇರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಭವಾನಿಶಂಕರ್‌ರವರ ನಗಿಸುವ ಕವನಗಳು ಎಂಬ ಕೃತಿಯನ್ನು ಉಡುಪಿಯ ಹಾಸ್ಯ ಬರಹಗಾರರಾದ ಶ್ರೀ ಎಚ್. ಗೋಪಾಲ ಭಟ್ಟರು ಬಿಡುಗಡೆ ಮಾಡಿದರು.
          ಕೃತಿಯನ್ನು ಬಿಡುಗಡೆ ಮಾಡಿದ ಅವರು ಇಲ್ಲಿಯ ಹನಿಗವನಗಳು ದುಂಡಿರಾಜರ ಕವನಗಳಂತೆ ಆಕರ್ಷಕವಾಗಿವೆ ಎಂದರು. ಇಲ್ಲಿಯ ೨೧೬ ಕವನಗಳಿಗೆ ೨೧೬ ಚಿತ್ರಗಳಿವೆ. ಅವು ಫೋಟೋಗಳು. ಆ ಫೋಟೋಗಳನ್ನು ಅವರೇ ಕಂಪ್ಯೂಟರ್ ಮೂಲಕ ಅತ್ತಿತ್ತ ತಿರುಚಿ ಕವನಕ್ಕೆ ಹೊಂದುವಂತೆ ಬದಲಾಯಿಸಿ ನೀಡಿದ್ದಾರೆ. ಅವುಗಳನ್ನು ನೋಡಿದರೆ ಶ್ರೀಯತರು ಫೋಟೋಗಳನ್ನು ನೋಡಿ ಕವನಗಳನ್ನು ಬರೆದರೋ ಎನ್ನುವಷ್ಟು ಆಶ್ಚರ್ಯವಾಗುತ್ತದೆ. ಇಲ್ಲಿಯ ಫೋಟೋಗಳು ಅತ್ಯಂತ ಪರಿಣಾಮಕಾರಿಯಾಗಿವೆ. ಇಲ್ಲಿಯ ಕವನಗಳಲ್ಲಿ ವೈವಿಧ್ಯತೆಯಿದೆ. ಕಾಮ, ಪ್ರೇಮ, ಸಂಸಾರ, ಭ್ರಷ್ಟಾಚಾರದ ವಿಷಯಗಳಿಂದ ಹಿಡಿದು ವಿಜ್ಞಾನ, ತಂತ್ರಜ್ಞಾನ, ಜಾಗತೀಕರಣ, ಪರಿಸರ, ಕಂಪ್ಯೂಟರ್‌ನಂತಹ ಅತ್ಯಾಧುನಿಕ ವಿಷಯಗಳ ಮೇಲೆ ಹನಿಗವನಗಳನ್ನು ರಚಿಸಿದ್ದಾರೆ. ಇವು ಕನ್ನಡಕ್ಕೆ ಹೊಸತು. ನಗಿಸುವ ಕವನಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ, ತಂತಾನೆ ಓದಿಸಿಕೊಂಡು ಹೋಗುತ್ತವೆ, ವೈವಿಧ್ಯಮಯವಾದ ಪ್ರಪಂಚ ಜ್ಞಾನವನ್ನು ನೀಡುತ್ತವೆ, ಅರಿವಿನ ಕಣ್ಣು ತೆರೆಸುತ್ತವೆ ಎಂದರು.
          ಪ್ರಾಂಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಮಾತನಾಡುತ್ತ ಇಲ್ಲಿಯ ಹನಿಗವನಗಳು ಆಯುರ್ವೇದಿಕ್ ಅಲ್ಲ ಹೋಮಿಯೋಪತಿಕ್ ಕೂಡ ಅಲ್ಲ. ಅವು ಸಮಾಜದ ಅಂಕುಡೊಂಕುಗಳಿಗೆ ಮಾಡಿದ ಸರ್ಜರಿ. ಕಂಪ್ಯೂಟರ್, ಇಂಟರ್‌ನೆಟ್, ಕಾರ್ ಡ್ರೈವಿಂಗ್, ಕಾನೂನು, ವ್ಯಕ್ತಿತ್ವ ವಿಕಸನದಂತಹ ವಿಷಯಗಳನ್ನು ಆಕರ್ಷಕವಾಗಿ ಬರೆದ ಶ್ರೀಯುತರು ಇದೀಗ ಹನಿಗವನಗಳ ಕೋಟೆಗೆ ಲಗ್ಗೆಯಿಟ್ಟಿದ್ದಾರೆ ಎಂದರು.
          ಡಾ. ಪದ್ಮನಾಭ ಭಟ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ಗೋಪಾಲಕೃಷ್ಣ ಸಾಮಗರು ವಂದಿಸಿದರು. ಅಶ್ವಿನ್ ಲಾರೆನ್ಸ್ ಕರ್ನೇಲಿಯೋ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ವಿಠಲ ನಾಯಕ್‌ರವರು ಉಪಸ್ಥಿತರಿದ್ದರು.
ಎನ್.ಭವಾನಿಶಂಕರ್‌ರವರ ನಗು ಮತ್ತು ಆರೋಗ್ಯ-ಕೃತಿ ಬಿಡುಗಡೆ

          ಶಿರ್ವದ ಸಂತ ಮೇರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಭವಾನಿಶಂಕರ್‌ರವರ ನಗು ಮತ್ತು ಆರೋಗ್ಯ ಎಂಬ ಕೃತಿಯನ್ನು ಸಾಹಿತಿಗಳಾದ ಬಿ. ಸೀತಾರಾಮ ಭಟ್‌ರವರು ಬಿಡುಗಡೆ ಮಾಡಿದರು.
          ಕೃತಿಯನ್ನು ಬಿಡುಗಡೆ ಮಾಡಿದ ಅವರು ಈ ಕೃತಿಯು ಹಾಸ್ಯದ ಎಲ್ಲಾ ಆಯಾಮಗಳನ್ನು ತೆರೆದಿಡುವ ಉತ್ತಮವಾದ ಪ್ರಯತ್ನವನ್ನು ಮಾಡಿದೆ ಎಂದರು. ಹಾಸ್ಯ ನಮ್ಮ ಆರೋಗ್ಯವನ್ನು ರಕ್ಷಿಸುತ್ತದೆ ಮಾತ್ರವಲ್ಲ ಅದನ್ನು ಉತ್ತಮಗೊಳಿಸುತ್ತದೆ ಎಂಬುದನ್ನು ಹಾಸ್ಯವು ದೇಹಕ್ಕೆ ಔಷಧಿ ಹೇಗೆ?, ಹಾಸ್ಯವು ಮನಸ್ಸಿಗೆ ಔಷಧಿ ಹೇಗೆ? ಎಂಬ ಎರಡು ಅಧ್ಯಾಯಗಳ ಮೂಲಕ ಅತ್ಯಂತ ಚೆನ್ನಾಗಿ ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಹಾಸ್ಯವು ದೇಹದಲ್ಲಿ ಉಂಟು ಮಾಡುವ ರಾಸಾಯನಿಕ ಬದಲಾವಣೆಗಳನ್ನು ವೈಜ್ಞಾನಿಕವಾಗಿ ನಿರೂಪಿಸಿದ್ದಾರೆ. ಹಾಸ್ಯದ ಮನೋಭಾವವನ್ನು ಹೊಂದಲು ವ್ಯಕ್ತಿಯು ತನ್ನನ್ನು ಹೇಗೆ ತಯಾರಿ ಮಾಡಿಕೊಳ್ಳಬೇಕು, ಹಾಸ್ಯ ಪ್ರಸಂಗವನ್ನು ಸೃಷ್ಟಿಸುವುದು ಹೇಗೆ, ಅದನ್ನು ಹೇಳುವುದು ಹೇಗೆ? ಎಂಬ ವಿಷಯಗಳನ್ನು ಉದಾಹರಣೆಗಳೊಂದಿಗೆ ಅತ್ಯಂತ ಚೆನ್ನಾಗಿ ವಿವರಿಸಿದ್ದಾರೆ. ಇದರ ಜೊತೆಗೆ ತನ್ನ ವೈಯಕ್ತಿಕ ಜೀವನದಲ್ಲಿ ಹಾಸ್ಯ ಪ್ರಯೋಗಿಸುವುದನ್ನು ಹೇಗೆ ಕಲಿತೆ ಎಂದು ಹೇಳುತ್ತಾ ತನ್ನ ಬದುಕಿನ ಅನೇಕ ಹಾಸ್ಯ ಪ್ರಸಂಗಗಳನ್ನು ಉದಾಹರಿಸುವುದರ ಮೂಲಕ ಕೃತಿಗೆ ಪ್ರಯೋಗಶೀಲತೆಯ ಹೊಸ ಮುಖವೊಂದನ್ನು ನೀಡಿದ್ದಾರೆ. ಈ ಪುಸ್ತಕದ ಎರಡನೆಯ ಭಾಗದಲ್ಲಿ ಘಟನೆಗಳನ್ನು ಆಕರ್ಷಕವಾಗಿ ನಿರೂಪಿಸುವುದು ಹೇಗೆ, ಅದರ ತಂತ್ರಗಳೇನು ಎಂಬುದನ್ನು ಪರಿಚಯಿಸುತ್ತ ಅನೇಕ ಹನಿಗವನಗಳು ಮತ್ತು ಜೋಕುಗಳನ್ನೂ ಉದಾಹರಿಸಿದ್ದಾರೆ. ಒಟ್ಟಿನಲ್ಲಿ ಈ ಕೃತಿಯು ಹಾಸ್ಯದ ಕಿರು ವಿಶ್ವಕೋಶವಾಗಿದ್ದು ಅದರ ಜೊತೆಗೆ ಮಾತನಾಡುವಾಗ ಬೇಕಾಗುವ ಸಂವಹನದ ತಂತ್ರಗಳನ್ನು ಪರಿಚಯಿಸಿದ್ದಾರೆ. 
          ಕಾಲೇಜಿನ ಪ್ರಾಂಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಇವತ್ತಿನ ಹಣವೇ ಪ್ರಧಾನವಾದ ಗಡಿಬಿಡಿಯ ಯಾಂತ್ರಿಕ ಜೀವನದಲ್ಲಿ ಹಾಸ್ಯವು ಕಾಣೆಯಾಗಿದ್ದು ಜನರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಮಾನಸಿಕ ಒತ್ತಡ ನಿವಾರಣೆಯ ನಿಟ್ಟಿನಲ್ಲಿ ಈ ಪುಸ್ತಕವು ಅತ್ಯಂತ ಪ್ರಾಯೋಗಿಕವಾದ ಪರಿಹಾರಗಳನ್ನು ನೀಡಿದೆ ಎಂದರು. ಓರ್ವ ಕನ್ನಡ ಪ್ರಾಧ್ಯಾಪಕರಾದ ಅವರು ಕಂಪ್ಯೂಟರ್, ಇಂಟರ್‌ನೆಟ್, ಕಾರ್ ಡ್ರೈವಿಂಗ್, ಕಾನೂನು, ಮನಶ್ಯಾಸ್ತ್ರಗಳಿಗೆ ಸಂಬಂಧಿಸಿದ ಕೃತಿಗಳನ್ನು ಅತ್ಯಂತ ಸರಳವಾದ ಕಸ್ತೂರಿ ಪರಿಮಳದ ಕನ್ನಡದಲ್ಲಿ ಬರೆಯುತ್ತಿರುವುದಕ್ಕಾಗಿ ಅಭಿನಂದಿಸಿದರು.      
          ಡಾ. ಪದ್ಮನಾಭ ಭಟ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ವಿಠಲ ನಾಯಕ್‌ರವರು ವಂದಿಸಿದರು. ಶ್ರೀ ಲತಾ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ಗೀತಾರವರು ಉಪಸ್ಥಿತರಿದ್ದರು.            

Thursday, September 29, 2011

ನಿಮ್ಮನ್ನು ರಕ್ಷಿಸುವ ಕಾನೂನುಗಳು-ಕೃತಿ ಬಿಡುಗಡೆ


ಶಿರ್ವದ ಸಂತ ಮೇರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಭವಾನಿಶಂಕರ್‌ರವರ ನಿಮ್ಮನ್ನು ರಕ್ಷಿಸುವ ಕಾನೂನುಗಳು  ಎಂಬ ಕೃತಿಯನ್ನು ಉಡುಪಿಯ ಖ್ಯಾತ ವಕೀಲರಾದ ಶ್ರೀ ಅಸೀದುಲ್ಲಾರವರು ಬಿಡುಗಡೆ ಮಾಡಿದರು.
            ಶ್ರೀ ಅಸೀದುಲ್ಲಾರವರು ಮಾತನಾಡುತ್ತ ಈ ಕೃತಿಯಲ್ಲಿ ವಾಹನ ಅಪಘಾತವಾದಾಗ ಏನು ಮಾಡಬೇಕು ಎಂಬುದನ್ನು ವಿವರವಾಗಿ ಬರೆದಿದ್ದಾರೆ. ಕನ್ನಡಕ್ಕೆ ಈ ಲೇಖನ ಹೊಸತು. ನಮ್ಮ ಸಾಮಾನ್ಯ ಪ್ರಜೆಗಳು ಮಾಹಿತಿ ಹಕ್ಕು ಕಾನೂನಿನ ಪ್ರಕಾರ ನಮ್ಮ ಸ್ವಂತ ಸಮಸ್ಯೆಗಳು ಅಥವಾ ಈ ದೇಶದ ಭದ್ರತೆಯನ್ನು ಬಿಟ್ಟು ಬೇರೆ ಯಾವುದೇ ವಿಷಯದ ಬಗ್ಗೆ ಹೇಗೆ ಅರ್ಜಿ ಸಲ್ಲಿಸಿ ೩೦ ದಿನಗಳಲ್ಲಿ ಮಾಹಿತಿಯನ್ನು ಪಡೆಯಬಹುದು, ಸರಕಾರಿ ಆಫೀಸುಗಳ ಒಳಗೆ ಹೋಗಿ ಮೂಲ ದಾಖಲೆಗಳನ್ನು ಪರಿಶೀಲಿಸಲು ಏನು ಮಾಡಬೇಕು, ಕೆಲಸ ಮಾಡಿಕೊಡದಿರುವ ಅಥವಾ ಲಂಚ ಕೇಳುವ ಅಧಿಕಾರಿಯ ವಿರುದ್ಧ, ಅಕ್ರಮ ಸಂಪತ್ತು ಗಳಿಸಿರುವವರ ವಿರುದ್ಧ ಲೋಕಾಯುಕ್ತಕ್ಕೆ ಹೇಗೆ ದೂರು ನೀಡಬಹುದು, ವರದಕ್ಷಿಣೆಯ ಕಿರುಕುಳದಿಂದ ರಕ್ಷಣೆ ಪಡೆಯುವುದು ಹೇಗೆ, ಪೋಲೀಸರ ಕಿರುಕುಳದಿಂದ ರಕ್ಷಣೆ ಪಡೆಯಲು ಇರುವ ಕಾನೂನುಗಳೇನು, ನಾಮಿನೇಶನ್, ವಿಲ್, ಪವರ್ ಆಫ್ ಅಟಾರ್ನಿ, ಸ್ತ್ರೀ ಶೋಷಣೆಯ ವಿರುದ್ಧ ಇರುವ ಕಾನೂನುಗಳು ಇತ್ಯಾದಿ ವಿಷಯಗಳನ್ನು ಪರಿಚಯಿಸಿದ್ದಾರೆ.     ಲೇಖಕರು ತನ್ನು ಬದುಕಿನ ಘಟನೆಗಳನ್ನು ಹೇಳುತ್ತ ಕಥನ ಶೈಲಿಯಲ್ಲಿ ಈ ಪುಸ್ತಕವನ್ನು ಬರೆದಿದ್ದು ೨೦೦ಕ್ಕೂ ಹೆಚ್ಚು  ಫೋಟೋಗಳ ಮೂಲಕ ಕೃತಿಯನ್ನು ಅಂದಗೊಳಿಸಿದ್ದಾರೆ. ಈ ಕೃತಿಯು ಒಂದು ಕತೆಯ ರೀತಿಯಲ್ಲಿ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ ಎಂದು ಶ್ರೀ ಅಸೀದುಲ್ಲಾರವರು ಹೇಳಿದರು.
            ಕಾಲೇಜಿನ ಪ್ರಾಂಶುಪಾಲರಾದ ಡಾ. ಜಾನ್ ಕ್ಲಾರೆನ್ಸ್ ಮಿರಾಂಡರವರು ಎನ್.ಭವಾನಿಶಂಕರ್‌ರವರ ಇಂಟರ್‌ನೆಟ್ ಕಲಿಯಿರಿ ಕೃತಿಯ ಒಂದೂವರೆ ವರ್ಷದಲ್ಲಿನ ೬ನೇ ಮುದ್ರಣವನ್ನು ಮತ್ತು ೩ ತಿಂಗಳಲ್ಲಿ ಮರು ಮುದ್ರಣಗೊಂಡ ಗೆಲ್ಲುವ ದಾರಿಗಳು ಇಲ್ಲಿವೆ ಕೃತಿಯನ್ನು ಬಿಡುಗಡೆ ಮಾಡುತ್ತ ಎನ್.ಭವಾನಿಶಂಕರ್‌ರವರ ಕೃತಿಗಳ ವಾಪ್ತಿ ಕವನ, ನಾಟಕ, ಕಂಪ್ಯೂಟರ್, ಇಂಟರ್‌ನೆಟ್, ವ್ಯಕ್ತಿತ್ವ ವಿಕಸನ, ಕಾರ್ ಡ್ರೈವಿಂಗ್‌ಗಳನ್ನು ದಾಟಿ ಇದೀಗ ಕಾನೂನಿನ ಪರಿಧಿಗೆ ಬಂದು ನಿಂತಿದೆ. ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಕೃತಿಗಳನ್ನೇ ಬರೆಯುತ್ತಿರುವುದಕ್ಕಾಗಿ ಲೇಖಕರನ್ನು ಅಭಿನಂದಿಸಿದರು.          
            ಡಾ. ಪದ್ಮನಾಭ ಭಟ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ಗೋಪಾಲಕೃಷ್ಣ ಸಾಮಗರವರು ವಂದಿಸಿದರು. ಅಶ್ವಿನ್ ಲಾರೆನ್ಸ್ ಕರ್ನೇಲಿಯೋ ಕಾರ್ಯಕ್ರಮ ನಿರ್ವಹಿಸಿದರು.
ಒಬಾಮ-ಅಮೆರಿಕವನ್ನು ಬದಲಿಸಬಲ್ಲೆಯ

ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಮುಜಾಫರ್ ಅಸ್ಸಾದಿಯವರು ತಾವು ಅಮೆರಿಕಕ್ಕೆ ಭೇಟಿ ನೀಡಿದಾಗ ಅಲ್ಲಿ ಕಂಡು ಬಂದ ಕರಿಯ ನೀಗ್ರ್ರೋಗಳನ್ನು ಕುರಿತಂತಹ ತಾರತಮ್ಯವನ್ನು ಎಳೆ ಎಳೆಯಾಗಿ ವಣರ್ಿಸಿದರು. ಅಮೆರಿಕದ ಬಂಡವಾಳಶಾಹಿ ಆರಂಭಗೊಂಡಿದ್ದೇ ಕರಿಯರ ಬೆವರಿನಿಂದ ಎಂದು ಹೇಳುತ್ತ, ಆ ಜನಾಂಗದಲ್ಲಿ ಹುಟ್ಟಿ ಬಂದ ಒಬಾಮ ಅವರ ಪರಿಸ್ಥಿತಿಯನ್ನು ಬದಲಿಸಬಲ್ಲರೆ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಅಮೆರಿಕದ ಬಿಳಿಯರು ಅಮೆರಿಕದ ಮೂಲನಿವಾಸಿಗಳನ್ನು ಯುದ್ಧ ಮಾಡದೆಯೆ ನಾಶ ಮಾಡಿದ ರೀತಿ, ಕಪ್ಪು ನೀಗ್ರೋಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಟೀಕಿಸಿದರು. ಅಮೆರಿಕವನ್ನು ಬದಲಾಯಿಸುವುದು ಒಬಾಮರವರಿಗೆ ಸಾಧ್ಯವಾಗಿಲ್ಲ ಎಂದು ಹೇಳಿದರು.   
ಪ್ರಪಂಚದ ಶ್ರೀಮಂತ ದೇಶಗಳಲ್ಲಿನ ಶೋಷಣೆಯನ್ನು ವಿಶ್ಲೇಷಿಸಿದರು. ಚೀನಾದ ಬೀಜಿಂಗ್ನಲ್ಲಿ ಎಲ್ಲವೂ ಶ್ರೀಮಂತ. ಬೀಜಿಂಗ್ನ ಹೊರಗೆ ಹೋದರೆ ಕಡು ಬಡತನವಿದೆ. ಇದರ ಜೊತೆಗೆ ತಾವು ಭೇಟಿ ನೀಡಿದ ನೆದರ್ಲ್ಯಾಂಡ್, ಇರಾನ್, ಮಲೇಶಿಯ, ಬಾಂಗ್ಲಾ, ಇಂಗ್ಲೆಂಡ್, ಥೈಲ್ಯಾಂಡ್, ಮಲೇಶಿಯ, ಮೊಜಾಂಬಿಕ್, ಕೆನ್ಯಾ, ದಕ್ಷಿಣ ಆಫ್ರಿಕಾ, ಮಧ್ಯ ಪ್ರಾಚ್ಯ ಇತ್ಯಾದಿ ದೇಶಗಳ ಸಾಮಾಜಿಕ ಸ್ಥಿತಿ ಗತಿಗಳನ್ನು ಹೋಲಿಸಿ ವಿಶ್ಲೇಷಿಸಿದರು.    
ಪ್ರೊ. ಗೋಪಾಲಕೃಷ್ಣ ಸಾಮಗರವರು ಸ್ವಾಗತಿಸಿದರು. ಎನ್.ಭವಾನಿಶಂಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಎಸ್ ಪದ್ಮನಾಭ ಭಟ್ರವರು ವಂದಿಸಿದರು. ಪ್ರಾಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಶುಭ ಕೋರಿದರು.      
ದಿಕ್ಕು ತಪ್ಪಿದ ಪದವಿ ಶಿಕ್ಷಣ-ಶಿರ್ವದಲ್ಲಿ ವಿಚಾರಗೋಷ್ಠಿ

ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ಪದವಿ ಶಿಕ್ಷಣದ ಸ್ವರೂಪ ಮತ್ತು ಸುಧಾರಣೆಯ ಸಾಧ್ಯತೆಗಳನ್ನು ಕುರಿತಂತೆ ವಿಚಾರಗೋಷ್ಠಿ ನಡೆಯಿತು. ಕಾರ್ಯಕ್ರಮದ ಸಂಚಾಲಕರಾದ ಡಾ. ಪದ್ಮನಾಭ ಭಟ್‌ರವರು ಮಾತನಾಡುತ್ತ ಭಾರತ ದೇಶದಲ್ಲಿ ಶಿಕ್ಷಣವು ನಡೆದು ಬಂದ ದಾರಿಯ ಅವಲೋಕನ ಮಾಡಿದರು. ಇಂದಿನ ಸೆಮಿಸ್ಟರ್ ಸಿಸ್ಟಂನಲ್ಲಿ ವಿದ್ಯಾರ್ಥಿಗಳು ಬಾಯಿ ಪಾಠ ಹೊಡೆಯುವ ಯಂತ್ರಗಳಾಗಿ ಬಿಟ್ಟಿದ್ದಾರೆ. ನಾಲ್ಕು ತಿಂಗಳಲ್ಲಿ ವಿದ್ಯಾರ್ಥಿಗಳು ಮೂರು ಪರೀಕ್ಷೆ ಬರೆಯಬೇಕು. ಪ್ರಾಧ್ಯಾಪಕರು ನ್ಯಾಕ್ ಸಮಿತಿಗೆ ತೋರಿಸಲೆಂದು ದಾಖಲೆಗಳನ್ನು ಬರೆಯುವ ಗುಮಾಸ್ತರಾಗುತ್ತಿದ್ದಾರೆ ಎಂದರು.
            ಲೇಖಕರಾದ ಎನ್.ಭವಾನಿಶಂಕರ್‌ರವರು ಮಾತನಾಡುತ್ತ ಹಿಂದಿನ ವಾರ್ಷಿಕ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳು ನಾನಾ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲಿ ಅವರ ಸೃಜನಶೀಲತೆಗೆ ಅವಕಾಶವಿತ್ತು. ಆದರೆ ಇಂದಿನ ಜಾಗತೀಕರಣ ಮತ್ತು ವಾಣಿಜ್ಯೀಕರಣ ವಿದ್ಯಾರ್ಥಿಗಳನ್ನು ಹಣ ಗಳಿಸುವ ಯಂತ್ರಗಳನ್ನಾಗಿಸುತ್ತಿದೆ. ಯಾವ ಕೋರ್ಸ್ ಹೆಚ್ಚು ಸಂಬಳದ ಉದ್ಯೋಗ ಕೊಡುತ್ತದೋ ಅದಕ್ಕೆ ಹೆಚ್ಚು ಬೇಡಿಕೆ. ಅದಕ್ಕೆ ಹೆಚ್ಚು ಡೊನೇಶನ್. ಶಿಕ್ಷಣ ಕ್ಷೇತ್ರವೆ ವ್ಯಾಪಾರೀಕರಣಕ್ಕೊಳಗಾದರೆ ದೇಶದ ಭವಿಷ್ಯವೇನು ಎಂದು ಕೇಳಿದರು.
            ಪ್ರೊ. ಸುಬ್ರಹ್ಮಣ್ರವರು ಮಾತನಾಡುತ್ತ ಇಂದಿನ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳಿಗೆ ಓದಿದ್ದನ್ನು ಜೀರ್ಣ ಮಾಡಿಕೊಳ್ಳಲು ಅವಕಾಶ ಕೊಡುತ್ತಿಲ್ಲ. ಪರೀಕ್ಷೆ ಮುಗಿದ ಮೇಲೆ ನೀನು ಹಿಂದಿನ ಸೆಮಿಸ್ಟರ್‌ನಲ್ಲಿ ಓದಿದ್ದೇನು ಎಂದು ಕೇಳಿದರೆ ಅವನಿಗೆ ಏನೂ ನೆನಪಿರುವುದಿಲ್ಲ. ಕಾಲೇಜು ಶಿಕ್ಷಣದಲ್ಲಿ ಬಾಯಿ ಪಾಠ ಹೊಡೆದು ಬರೆಯುವ ಪರೀಕ್ಷೆಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿ ವಿದ್ಯಾರ್ಥಿಯ ನಿಜವಾದ ಜ್ಞಾನದ ಪರೀಕ್ಷಗೆ ಅವಕಾಶ ಮಾಡಿಕೊಡಬೇಕು ಎಂದರು.
            ಪ್ರೊ. ವಿನ್ಸೆಂಟ್‌ರವರು ಮಾತನಾಡುತ್ತ ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಆ ದಾರಿಯಲ್ಲಿ ನಡೆಯಬೇಕು. ಮೊಲ ಓಡುವುದರಲ್ಲಿ ಸಾಧನೆ ಮಾಡಬೇಕು, ಅಳಿಲು ಮರ ಹತ್ತುವುದರಲ್ಲಿ ಸಾಧನೆ ಮಾಡಬೇಕು. ಇದು ಉಲ್ಟಾ ಆಗಬಾರದು ಎಂದರು. ಪ್ರೊ. ಸರಿತಾ ಆಳ್ವರವರು ಇಂದು ಶೈಕ್ಷಣಿಕ ಸಾಧನಗಳ ಸಂಖ್ಯೆ ಹೆಚ್ಚಾಗಿದೆ. ವಿದ್ಯೆ ಕಲಿಸುವುದಕ್ಕಾಗಿ ನಾನಾ ರೀತಿಯ ತಂತ್ರಜ್ಞಾನ ಬಂದಿದೆ. ಕಂಪ್ಯೂಟರ್, ಪ್ರ್ರೊಜೆಕ್ಟರ್, ಪವರ್ ಪಾಯಿಂಟ್, ಟಚ್ ಬೋರ್ಡ್, ಎಸಿ ರೂಂ ಎಲ್ಲಾ ಇದೆ. ಆದರೆ ಇವುಗಳ ನಡುವೆ ಜ್ಞಾನ ಕಾಣೆಯಾಗುತ್ತಿರುವುದು ವಿಷಾದನೀಯ ಎಂದರು.       

Thursday, September 22, 2011

ಮಹಿಳೆ ವೈಯಕ್ತಿಕವಾಗಿ ಬೆಳೆಯಬೇಕು


ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯವನ್ನು ಕುರಿತಂತೆ ವಿಚಾರಗೋಷ್ಠಿ ನಡೆಯಿತು. ದೇಶದಲ್ಲಿ ಮಹಿಳಾ ದೌರ್ಜನ್ಯವು ಹೆಚ್ಚುತ್ತಿರುವುದರಿಂದ ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ಸಂತ ಮೇರಿ ಸ್ನಾತಕೋತ್ತರ ವಿಭಾಗದ ಪ್ರೊ. ಶೋಭಾ ಡಿಸೋಜರವರು ಮಹಿಳಾ ದೌರ್ಜನ್ಯದ ಚಾರಿತ್ರಿಕ ಸ್ವರೂಪವನ್ನು ಮಹಿಳೆಯ ದೈಹಿಕ ಪರಿಸ್ಥಿತಿ, ಆ ಕಾಲದ ಅರಿವಿನ ಕೊರತೆ ಮತ್ತು ಸಾಮಾಜಿಕ ಆರ್ಥಿಕ ಸ್ವರೂಪದ ಹಿನ್ನೆಲೆಯ ನೆಲೆಯಲ್ಲಿ ವಿಶ್ಲೇಷಿಸಿದರು. ಅನಂತರ ಮಾತನಾಡಿದ ಪ್ರೊ. ಜಸಿಂಥಾ ಫೆರ್ನಾಂಡಿಸ್‌ರವರು ವಿಜ್ಞಾನದ ಕ್ಷೇತ್ರದಲ್ಲಿ ಬದಲಾವಣೆಯಾದಂತೆ, ಕೈಗಾರಿಕೀಕರಣ ಮತ್ತು ಆಧುನಿಕತೆಯು ಸ್ತ್ರೀಯರ ಬದುಕಿನಲ್ಲಿ ಉಂಟು ಮಾಡಿದ ಬದಲಾವಣೆಯು ಅತ್ಯಂತ ಮಹತ್ವದ್ದೆಂದು ಹೇಳಿದರು.

ಫ್ರೀಡಾ ಡಿಸೋಜರವರು ಪಶ್ಚಿಮದ ಸಂಸ್ಕೃತಿ ಮತ್ತು ಜಾಗತೀಕರಣವು ನಮ್ಮ ಸಮಾಜದಲ್ಲಿ ಹುಟ್ಟಿಸಿರುವ ಅಲ್ಲೋಲ ಕಲ್ಲೋಲದ ಸ್ವರೂಪವನ್ನು ಪರಿಚಯಿಸಿದರೆ ಯಶೋದರವರು ನಗರ ಮತ್ತು ಗ್ರಾಮೀಣ ಸಂದರ್ಭದಲ್ಲಿ ದೌರ್ಜನ್ಯದ ಹಿಂದಿರುವ ಕಾರಣಗಳನ್ನು ಮತ್ತು ಅದರ ಸ್ವರೂಪವನ್ನು ವಿಶ್ಲೇಷಿಸಿದರು. ಪ್ರೊ. ವಿನ್ಸೆಂಟ್ ಡಿಸೋಜರವರು ಮಹಿಳಾ ದೌರ್ಜನ್ಯವನ್ನು ನಿವಾರಿಸುವುದಕ್ಕೆ ಸಂಬಂಧಿಸಿದಂತೆ ಆಗಬೇಕಾದ ಕೆಲಸಗಳು ಮತ್ತು ಇದರಲ್ಲಿ ಪುರುಷರ ಪಾತ್ರ ಏನಿರಬೇಕೆಂಬುದನ್ನು ವಿವರಿಸಿದರು.

ಗೋಷ್ಠಿಯ ಸಂಚಾಲಕರಾದ ಎನ್.ಭವಾನಿಶಂಕರ್‌ರವರು ಮಹಿಳೆಯರ ಸಬಲೀಕರಣ ಆಗಬೇಕಾದರೆ ಅವರಿಗೆ ದೊರಕಬೇಕಾದ ಶಿಕ್ಷಣ ಮತ್ತು ಸ್ತ್ರೀ ಶೋಷಣೆಯ ಸ್ವರೂಪದ ಅರಿವು ಬಹಳ ಮುಖ್ಯವಾದುದೆಂದು ಹೇಳುತ್ತಾ ಪ್ರತಿಯೊಬ್ಬ ಸ್ತ್ರೀ ತನ್ನ ಸಮಸ್ಯೆಯನ್ನು ಕುರಿತಂತೆ ತಾನೇ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆಯೆಂದು ಹೇಳಿದರು. ಇದರ ಜೊತೆಗೆ ಸ್ತ್ರೀಯರು ಒಂದು ಸಮೂಹವಾಗಿ ತಮ್ಮ ಮೇಲೆ ಆಗುವ ದೌರ್ಜನ್ಯದ ವಿರುದ್ಧ ಹೋರಾಡಬೇಕಾದ ಅಗತ್ಯವಿದೆಯಾದರೂ ಸ್ತ್ರೀಯರ ಮೇಲಿನ ದೌರ್ಜನ್ಯವನ್ನು ಕೇವಲ ಸ್ರ್ರೀಯರ ಸಮಸ್ಯೆಯಾಗಿ ನೋಡದೆ ನಮ್ಮ ಸಮಾಜದ ಒಂದು ಕಪ್ಪು ಚುಕ್ಕೆ ಎಂದು ತಿಳಿದು ಅದನ್ನು ಸರಿಪಡಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.

ಜೆನಿಫರ್‌ವಾಜ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಲೋಯಲ್ ಕೊರೆಯ ವಂದಿಸಿದರು.


ಕಾರ್ ಡ್ರೈವಿಂಗ್ ಕುರಿತ ಕನ್ನಡದ ಮೊದಲ ಕೃತಿ
ಕಾರ್ ಡ್ರೈವಿಂಗ್ ಮತ್ತು ನಿರ್ವಹಣೆ-ಕೃತಿ ಬಿಡುಗಡೆ

ಸಂತ ಮೇರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಭವಾನಿಶಂಕರ್‌ರವರ ಕಾರ್ ಡ್ರೈವಿಂಗ್ ಮತ್ತು ನಿರ್ವಹಣೆ ಎಂಬ ಕೃತಿಯನ್ನು ಬಜ್ಪೆಯ ನಿರಂಜನ ಸ್ವಾಮಿ ಪಾಲಿಟೆಕ್ನಕ್‌ನ ಮೆಕಾನಿಕಲ್ ವಿಭಾಗದ ಪ್ರಾಧ್ಯಾಪಕರಾದ ಎಂ. ದಿವಾಕರ ಶೆಟ್ಟಿಯವರು ಬಿಡುಗಡೆ ಮಾಡಿದರು.
ಈ ವಿಷಯವನ್ನು ಕುರಿತಂತೆ ಕನ್ನಡದಲ್ಲಿ ಬಂದ ಮೊದಲ ಕೃತಿ ಇದಾಗಿದೆ. ಈ ಕೃತಿಯಲ್ಲಿ ಕಾರ್ ಡ್ರೈವಿಂಗನ್ನು ಕಲಿಯಬೇಕಾದ ರೀತಿ, ಕಾರಿನ ಯಂತ್ರಗಳ ಎಲ್ಲಾ ಬಿಡಿ ಭಾಗಗಳು, ಅವುಗಳು ಕೆಲಸ ಮಾಡುವ ರೀತಿ, ಕಾರ್ ಹಾಳಾಗದಂತೆ ಗಮನಿಸುತ್ತಿರಬೇಕಾದ ಕಾರಿನ ಭಾಗಗಳು, ಟ್ರಾಫಿಕ್ ಸಿಗ್ನಲ್‌ಗಳ ವಿವರಣೆ, ಡ್ರೈವಿಂಗ್ ಪರೀಕ್ಷೆಗೆ ಮಾಡಬೇಕಾದ ತಯಾರಿ ಮತ್ತು ಅಪಘಾತವನ್ನು ತಡೆಯಬಹುದಾದ ರೀತಿ-ಇವುಗಳನ್ನು ಅತ್ಯಂತ ಸರಳವಾದ ಭಾಷೆಯಲ್ಲಿ ಬರೆಯಲಾಗಿದೆ. ಇವುಗಳನ್ನು ವಿವರಿಸಲು ಲೇಖಕರು ೩೦೦ಕ್ಕೂ ಹೆಚ್ಚು ಚಿತ್ರಗಳನ್ನು ನೀಡಿದ್ದಾರೆ. ಇದು ಅತ್ಯಮೂಲ್ಯವಾದ ಪುಸ್ತಕ ಎಂದು ಎಂ. ದಿವಾಕರ ಶೆಟ್ಟಿಯವರು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿಯಾದ ಲಕ್ಷ್ಮೀ ವೆಂಕಟೇಶ್ ಡ್ರೈವಿಂಗ್ ಸ್ಕೂಲ್‌ನ ಕೆ. ವೆಂಕಟೇಶ್ ಭಟ್‌ರವರು ಮಾತನಾಡಿ ವಿಜ್ಞಾನದಲ್ಲಿ ಮೊದಲು ಥಿಯರಿ ಕಲಿಯುವುದು ಅನಂತರ ಪ್ರಾಕ್ಟಿಕಲ್ಸ್ ಎಂಬುದು ವಿಧಾನ. ಆದರೆ ಕಾರು ಕಲಿಯುವವನು ಡ್ರೈವಿಂಗ್ ಸೀಟಿನಲ್ಲಿ ಕುಳಿತು ಕಾರು ಬಿಡಲು ಆರಂಭಿಸುತ್ತಾನೆ. ಅದನ್ನು ಕುರಿತಂತೆ ಅವನಲ್ಲಿ ಯಾವುದೇ ಥಿಯರಿ ಜ್ಞಾನ ಇರುವುದಿಲ್ಲ. ಕನ್ನಡದ ಈ ಮೊದಲ ಪುಸ್ತಕ ಈ ಎಲ್ಲ ಕೊರತೆಗಳನ್ನು ಸಮಗ್ರವಾಗಿ ತುಂಬಿಕೊಟ್ಟಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎನ್.ಭವಾನಿಶಂಕರ್‌ರವರ ಅನೇಕ ಹೊಸ ವಿಷಯಗಳನ್ನು ಸೇರಿಸಿದ ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ ಎಂಬ ಕೃತಿಯ ಮೂರನೆಯ ಮುದ್ರಣವನ್ನು ಪ್ರಾಂಶುಪಾಲರಾದ ಡಾ. ಜಾನ್ ಕ್ಲಾರೆನ್ಸ್ ಮಿರಾಂಡರವರು, ಅನೇಕ ಹೊಸ ವಿಷಯಗಳನ್ನು ಸೇರಿಸಿದ ಇಂಟರ್‌ನೆಟ್ ಕಲಿಯಿರಿ ಎಂಬ ಕೃತಿಯ ಐದನೆಯ ಮುದ್ರಣವನ್ನು ಕೆ. ವೆಂಕಟೇಶ್ ಭಟ್‌ರವರು ಬಿಡುಗಡೆ ಮಾಡಿದರು. ಕೇವಲ ಹತ್ತು ತಿಂಗಳ ಅವಧಿಯಲ್ಲಿ ಈ ಕೃತಿಗಳು ಮರು ಮುದ್ರಣಗೊಳ್ಳುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾ ಎನ್.ಭವಾನಿಶಂಕರ್‌ರವರ ವಿಜ್ಞಾನ ಸಾಹಿತ್ಯವನ್ನು ಕನ್ನಡಕ್ಕೆ ಒಗ್ಗಿಸುವ ಪ್ರಯತ್ನವನ್ನು ಶ್ಲಾಘಿಸಿದರು.

ಡಾ. ಪದ್ಮನಾಭ ಭಟ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ಗೋಪಾಲಕೃಷ್ಣ ಸಾಮಗರವರು ವಂದಿಸಿದರು. ಅಶ್ವಿನ್ ಲಾರೆನ್ಸ್ ಕರ್ನೇಲಿಯೋ ಕಾರ್ಯಕ್ರಮ ನಿರ್ವಹಿಸಿದರು.

Saturday, September 17, 2011

ಅಣ್ಣಾ ಹಜಾರೆಯವರ ಹೋರಾಟ-ವಿಚಾರ ಸಂಕಿರಣ
ಅಣ್ಣಾ ಹಜಾರೆಯವರ ಹೋರಾಟವನ್ನು ಕುರಿತಂತೆ ಸಂತ ಮೇರಿ ಕಾಲೇಜಿನ ವಿದ್ಯಾರ್ಥಿ ಸಂಘ ಮತ್ತು ಕನ್ನಡ ವಿಭಾಗದ ವತಿಯಿಂದ ತಾ. ೨೬-೦೮-೨೦೧೧ರಂದು ವಿಚಾರ ಸಂಕಿರಣ ನಡೆಯಿತು. ಈ ವಿಚಾರ ಸಂಕಿರಣದ ಸಂಯೋಜಕರಾದ ಎನ್.ಭವಾನಿಶಂಕರ್‌ರವರು ಪ್ರಸಕ್ತ ಚಳುವಳಿಯು ನಿಷ್ಕಲಂಕ ವ್ಯಕ್ತಿತ್ವದ ಅಣ್ಣಾ ಹಜಾರೆಯವರು ಈ ಹೋರಾಟದ ಆಶಾ ಬಿಂದುವಾಗಿರುವುದು ಮತ್ತು ಭಾರತೀಯ ಜನ ಸಮುದಾಯದಲ್ಲಿ ಭ್ರಷ್ಟಾಚಾರದ ಬಗ್ಗೆ ತುಂಬಿಕೊಂಡ ಆಕ್ರೋಶವನ್ನು ಆಧರಿಸಿದೆ ಎಂದರು. ಡಾ. ಪದ್ಮನಾಭ ಭಟ್‌ರವರು ಲೋಕಪಾಲ ಮಸೂದೆಯು ರಾಜಕಾರಣಿಗಳ ನಿರಾಸಕ್ತಿಯಿಂದಾಗಿ ಚಾರಿತ್ರಿಕವಾಗಿ ತಿರಸ್ಕಾರಗೊಳ್ಳತ್ತಾ ಬಂದ ರೀತಿಯನ್ನು ಹೇಳಿದರೆ, ಪ್ರೊ. ಸುಬ್ರಹ್ಮಣ್ಯರವರು ಗಾಂಧಿ, ಜೆಪಿ ಮತ್ತು ಅಣ್ಣಾ ಹಜಾರೆಯವರ ಚಳವಳಿಯ ಅವಲೋಕನಗೈದರು. ಪ್ರೊ. ವಿನ್ಸೆಂಟ್ ಡಿಸೋಜರು ಪ್ರಸ್ತುತ ಕಾಲಸಂದರ್ಭದಲ್ಲಿನ ಭ್ರಷಾಚಾರದ ಅಗಾಧತೆಯನ್ನು ಪರಿಚಯಿಸುತ್ತ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ತಮ್ಮ ಕೆಲಸವನ್ನು ನಿರ್ವಹಿಸುತ್ತಲೆ ಈ ಚಳವಳಿಯನ್ನು ಬೆಳೆಸಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದರು. ಪ್ರೊ. ಸರಿತಾ ಡಿಸೋಜರವರು ರಾಜಕಾರಣದ ಅವಸ್ಥೆಗಿಂತ ಪ್ರಜೆಗಳ ಹೊಣೆಗಾರಿಕೆ, ಭ್ರಷ್ಟಾಚಾರವನ್ನು ಪ್ರಶ್ನಿಸುವ ಮನೋಧರ್ಮ ಮತ್ತು ಪ್ರಾಮಾಣಿಕತೆ ಬಹಳ ಮುಖ್ಯವಾದುದೆಂದು ಹೇಳಿದರು. ಗಾಂಧಿ ಟೋಪಿ ಧರಿಸಿದ ವಿದ್ಯಾರ್ಥಿಗಳ ಕುತೂಹಲಕರವಾದ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿದರು. ಪ್ರಾಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತೋರ್ಪಡಿಸಿದ ಸಾಮಾಜಿಕ ಜವಾಬ್ದಾರಿಯನ್ನು ಪ್ರಶಂಸಿಸಿದರು. ದ್ವಿತೀಯ ಬಿ‌ಎ ವಿದ್ಯಾರ್ಥಿಯಾದ ಅಶ್ವಿನ್ ಲಾರೆನ್ಸ್ ಕರ್ನೇಲಿಯೋರವರು ಕಾರ್ಯಕ್ರಮವನ್ನು ನಿರ್ವಹಿಸಿದರು.